ADVERTISEMENT

ವಿದ್ಯುತ್ ಪರಿವರ್ತಕ ದುರಸ್ತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 14:38 IST
Last Updated 13 ಆಗಸ್ಟ್ 2024, 14:38 IST
ಕಕ್ಕೇರಾ ಪಟ್ಟಣದ ಸೋಮನಾಥ ಬಾವಿ ಹತ್ತಿರದ ವಿದ್ಯುತ್ ಪರಿವರ್ತಕ ದುರಸ್ತಿಗೆ ಕಾದಿದೆ
ಕಕ್ಕೇರಾ ಪಟ್ಟಣದ ಸೋಮನಾಥ ಬಾವಿ ಹತ್ತಿರದ ವಿದ್ಯುತ್ ಪರಿವರ್ತಕ ದುರಸ್ತಿಗೆ ಕಾದಿದೆ   

ಕಕ್ಕೇರಾ: ಪಟ್ಟಣದ ಸೋಮನಾಥ ಬಾವಿ ಹತ್ತಿರದ ಜಮೀನಲ್ಲಿರುವ ವಿದ್ಯುತ್ ಪರಿವರ್ತಕ ಸಮಸ್ಯೆಯಿದ್ದು, ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ರೈತ ಮುಖಂಡರಾದ ಅಂಬರೇಶ ತೇರಿನ್, ದೇವಿಂದ್ರಪ್ಪ ದೊರೆ, ನಂದಪ್ಪ ತೇರಿನ್ ಆರೋಪಿಸಿದ್ದಾರೆ.

‘ಜೆಸ್ಕಾಂ ಅಧಿಕಾರಿಗಳನ್ನು  ಖುದ್ದು ಭೇಟಿ ನೀಡಿ ವಿದ್ಯುತ್ ಪರಿವರ್ತಕ ಸಮಸ್ಯೆ ಬಗೆಹರಿಸುವಂತೆ ಜುಲೈ 26ರಂದು ದೂರು ನೀಡಿದ್ದರೂ  ಪ್ರಯೋಜನವಾಗಿಲ್ಲ. ಶೀಘ್ರವೇ ವಿದ್ಯುತ್ ಪರಿವರ್ತಕ ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅಂಬರೇಶ ತೇರಿನ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT