ADVERTISEMENT

ಯಾದಗಿರಿ: ಪಿಎಸ್‌ಐ ಸುವರ್ಣಾ ಮಾಲಶೆಟ್ಟಿ ಅಮಾನತು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 16:36 IST
Last Updated 7 ಆಗಸ್ಟ್ 2020, 16:36 IST
ಸುವರ್ಣ ಮಾಲಶೆಟ್ಟಿ
ಸುವರ್ಣ ಮಾಲಶೆಟ್ಟಿ   

ಯಾದಗಿರಿ: ನಕಲಿ ಚಿನ್ನಾಭರಣ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಸೈದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಸುವರ್ಣ ಮಾಲಶೆಟ್ಟಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನಾವಣೆ ತಿಳಿಸಿದ್ದಾರೆ.

ನಕಲಿ ಚಿನ್ನಾಭರಣ ಪ್ರಕರಣವನ್ನು ಸರಿಯಾಗಿ ನಿರ್ವಹಿಸದೆ ನ್ಯಾಯ ಕೇಳಿ ಬಂದವರಿಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಇದರಿಂದ ನೊಂದವರು ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಈ ವಿಷಯವನ್ನು ವಿಚಾರಣೆ ಮಾಡಿದಾಗ ಕರ್ತವ್ಯ ಲೋಪ ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT