ADVERTISEMENT

ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಸಾವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:36 IST
Last Updated 13 ಜೂನ್ 2025, 16:36 IST
ವೆಂಕಟೇಶ್ ಮಾನಪ್ಪ ಚವಾಣ್‌
ವೆಂಕಟೇಶ್ ಮಾನಪ್ಪ ಚವಾಣ್‌   

ಹುಣಸಗಿ: ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ತಾಲ್ಲೂಕಿನ ಜುಮಾಲಪುರ್ ದೊಡ್ಡತಾಂಡಾದ ಯೋಧ ವೆಂಕಟೇಶ್ ಮಾನಪ್ಪ ಚೌಹಾಣ್ (30) ಗುರುವಾರ ನಿಧನರಾದರು.

ಮೃತರಿಗೆ ತಂದೆ, ಪತ್ನಿ ಹಾಗೂ ಒಂದು ವರ್ಷದ ಪುತ್ರಿ ಇದ್ದಾರೆ. ವೆಂಕಟೇಶ್ ಚವಾಣ್ ಅವರು ಸಿಕ್ಕಿಂ ನಲ್ಲಿ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ನಲ್ಲಿ ಕಳೆದ ಮೂರು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಒಂದು ತಿಂಗಳ ಹಿಂದೆ ವರ್ಗಾವಣೆಯಾಗಿದ್ದರಿಂದಾಗಿ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದರು. ಕಳೆದ ನಾಲ್ಕೈದು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತು. ಸ್ಥಳೀಯವಾಗಿ ಚಿಕಿತ್ಸೆ ಪಡೆದಿದ್ದರು. ಗುಣಮುಖರಾಗದ್ದರಿಂದ ಬಾಗಲಕೋಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಶುಕ್ರವಾರ ಮಧ್ಯಾಹ್ನ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಹುಣಸಗಿ ತಹಶೀಲ್ದಾರ್ ಎಚ್.ಎ.ಸರಕಾವಸ್‌, ಹುಣಸಗಿ ಸಿಪಿಐ ರವಿಕುಮಾರ್ ನಾಯ್ಕೋಡಿ, ಕೊಡೇಕಲ್ಲ ಉಪತಹಶೀಲ್ದಾರ್ ಕಲ್ಲಪ್ಪ ಜಂಜನಗಡ್ಡಿ, ಪಿಎಸ್ಐ ಅಯ್ಯಪ್ಪ ಸೇರಿದಂತೆ ಇತರರು ಪಾಲ್ಗೊಂಡು ಅಂತಿಮ ದರ್ಶನ ಪಡೆದು ಪಡೆದರು.

ಹುಣಸಗಿ ತಾಲ್ಲೂಕಿನ ಜುಮಲಾಪುರ ದೊಡ್ಡ ತಾಂಡಾದಲ್ಲಿ ಮೃತ ಹವಾಲ್ದಾರ್ ವೆಂಕಟೇಶ್ ಚೌಹಾಣ್ ಅವರಿಗೆ ತಹಶೀಲ್ದಾರ್ ಎಚ್.ಎ. ಸರ್ ಕವಾಸ ಹಾಗೂ ಅಧಿಕಾರಿಗಳು ಅಂತಿಮ ಗೌರವ ಸಲ್ಲಿಸಿದರು.
ಹುಣಸಗಿ ತಾಲ್ಲೂಕಿನ ಜುಮಲಾಪುರ ದೊಡ್ಡ ತಾಂಡಾದಲ್ಲಿ ಮೃತ ಹವಾಲ್ದಾರ್ ವೆಂಕಟೇಶ್ ಚೌಹಾಣ್ ಅವರಿಗೆ ತಹಶೀಲ್ದಾರ್ ಎಚ್.ಎ. ಸರ್ ಕವಾಸ ಹಾಗೂ ಅಧಿಕಾರಿಗಳು ಅಂತಿಮ ಗೌರವ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.