ADVERTISEMENT

ಕುಟುಂಬಕ್ಕೆ ಕೋಲಿ ಸಮುದಾಯವೇ ಬೆನ್ನೆಲುಬು: ಶರಣಗೌಡ ಕಂದಕೂರ

ಕಂದಕೂರ: ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 1:52 IST
Last Updated 22 ಜನವರಿ 2021, 1:52 IST
ಗುರುಮಠಕಲ್ ತಾಲುಕಿನ ಕಂದಕೂರ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ಮಾತನಾಡಿದರು
ಗುರುಮಠಕಲ್ ತಾಲುಕಿನ ಕಂದಕೂರ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ಮಾತನಾಡಿದರು   

ಗುರುಮಠಕಲ್: ‘ನಮ್ಮ ದೊಡ್ಡಪ್ಪ ಸದಾಶಿವರೆಡ್ಡಿ ಕಂದಕೂರ ಹಾಗೂ ಶಾಸಕರಾದ ನಾಗನಗೌಡ ಕಂದಕೂರ ಅವರು ಇಂದು ಬೆಳೆಯಲು ಕಂದಕೂರ ಹಾಗೂ ಚಿಂತನಹಳ್ಳಿ ಗ್ರಾಮಸ್ಥರ ಬೆಂಬಲ ಕಾರಣ. ಜೊತೆಗೆ ನಮ್ಮ ಕುಟುಂಬಕ್ಕೆ ಸೋಲಿನಲ್ಲಿಯೂ ಬೆನ್ನೆಲುಬಾಗಿ ನಿಂತಿದ್ದು ಕೋಲಿ ಸಮಾಜದವರು. ಆದ್ದರಿಂದ ಕಂದಕೂರ, ಚಿಂತನಹಳ್ಳಿ ಗ್ರಾಮಸ್ಥರ ಮತ್ತು ಕೋಲಿ ಸಮುದಾಯದ ಋಣ ತೀರಿಸುವ ಕೆಲಸವನ್ನು ಮಾಡಲು ನಾನು ಸಿದ್ಧನಾಗಿರುತ್ತೇನೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ಭರವಸೆ ನೀಡಿದರು.

ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ ಬುಧವಾರ ಅಂಬಿಗರ ಚೌಡಯ್ಯ ಜಯಂತಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮೆಲ್ಲರ ಆಶೀರ್ವಾದದಿಂದಾಗಿ ಕಂದಕೂರ ಮನೆತನದ ಹೆಸರು ಬೆಳೆದು ನಿಂತಿದೆ. ಮುಂದಿನ ದಿನಗಳಲ್ಲಿ ನಮ್ಮ ಯುವ ಸಮುದಾಯದ ಜವಾಬ್ದಾರಿಯನ್ನು ನಾನು ಹೊರಲು ಸಿದ್ದನಿದ್ದೇನೆ ಎಂದರು.

ಚುನಾವಣೆಯ ಅವಧಿಯಲ್ಲಿ ಮಾತ್ರ ಪಕ್ಷದ ರಾಜಕೀಯ ಮಾಡೋಣ ಅದರ ನಂತರ ನಮ್ಮದೇನಿದ್ದರೂ ಅಭಿವೃದ್ಧಿಯತ್ತ ಗಮನ ಹರಿಸಬೇಕು. ನಾನು ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಕ್ತವಾಗಿ ಎಲ್ಲರ ಸಲಹೆಗಳನ್ನೂ ಪಡೆಯಲು ಸಿದ್ಧ ಎಂದರು.

ADVERTISEMENT

ಕಂದಕೂರ ಬಸ್ ನಿಲ್ದಾಣದಿಂದ ಕಾರ್ಯಕ್ರಮದ ವೇದಿಕೆಯವರೆಗೆ ಸಾರೋಟದಲ್ಲಿ ಕಂದಕೂರ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು.

ಪುರಸಭೆ ಅಧ್ಯಕ್ಷೆ ಪಾಪಣ್ಣ ಮನ್ನೆ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ತಮ್ಮಣ್ಣ, ನಿತ್ಯಾನಂದಸ್ವಾಮಿ, ಅಶೋಕ ಸಂಜನೋಳ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಂತೋಷ ನಿರೇಟಿ, ಪುರಸಭೆ ಸದಸ್ಯ ಬಾಲಪ್ಪ ದಸರಿ, ಆಶೋಕ ಕಲಾಲ್, ಜೆಡಿಎಸ್ ಮುಖಂಡ ಕಿಷ್ಟರೆಡ್ಡಿ ಪಾಟೀಲ್, ರಘನಾಥರೆಡ್ಡಿ ಗವಿನೋಳ್, ಪ್ರಕಾಶ್ ನೀರೆಟಿ, ವಿಜಯಕುಮಾರ್ ನೀರೆಟಿ ಸೇರಿದಂತೆ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿಗಳ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.