ಯಾದಗಿರಿ: ತಾಲ್ಲೂಕು ಪಂಚಾಯಿತಿ ಇನ್ನುಳಿದ ಸ್ವಲ್ಪ ಅವಧಿಯಲ್ಲಿ ಸಾಧನೆ ಮಾಡಿ ತೋರಿಸಿ ಎಂದು ನೂತನ ತಾ.ಪಂ. ಉಪಾಧ್ಯಕ್ಷೆಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಸಲಹೆ ನೀಡಿದರು.
ತಾ.ಪಂ. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿಯ ಲಲಿತಾ ಮರೆಪ್ಪ ಪೂಜಾರಿ ಠಾಣಾಗುಂದಿ ಅವರನ್ನು ಸೋಮವಾರ ತಮ್ಮ ಕಚೇರಿಯಲ್ಲಿಸನ್ಮಾನಿಸಿಮಾತನಾಡಿದರು.
ತಾಲ್ಲೂಕುಪಂಚಾಯಿತಿಯಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕಾರ ಸಿಕ್ಕಿರುವುದು ಸಂತಸದ ವಿಷಯ.ಸಿಕ್ಕ ಅಧಿಕಾರವನ್ನು ಸಮಾಜಮುಖಿಯಾಗಿ ಬಳಸಿಕೊಳ್ಳಿ. ನೂತನ ಉಪಾಧ್ಯಕ್ಷರು ಅಧಿಕಾರಿಗಳ ಸಹಕಾರದಿಂದ ಗ್ರಾಮೀಣ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಎಂದರು.
ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿ, ಬಿಜೆಪಿಯ ಸ್ಥಳೀಯ ಜನಪ್ರತಿನಿಧಿಗಳು ಸಾರ್ವಜನಿಕ ಕೆಲಸದ ಜೊತೆಗೆ ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದರು.
ಈ ವೇಳೆ ಪಕ್ಷದ ಮುಖಂಡರಾದ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಮಲ್ಲಣಗೌಡ ಪಾಟೀಲ ಹತ್ತಿಕುಣಿ, ಖಂಡಪ್ಪ ದಾಸನ್, ಮಹಾದೇವಪ್ಪ ಯಲಸತ್ತಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಮರೆಪ್ಪ ಪೂಜಾರಿ, ಬಸಪ್ಪಗೌಡ ಬೆಳಗುಂದಿ, ಮಕ್ಬೂಲ ಪಟೇಲ್ ಮುಂಡರಗಿ, ಬಸಪ್ಪ ಲಮಾಣಿ, ಪರ್ವತಪ್ಪ ನಾಯಕ ಠಾಣಾಗುಂದಿ, ನಿಂಗಪ್ಪ ತಳಕ, ಚನ್ನಬಸವರೆಡ್ಡಿ ಪಾಟೀಲ ಠಾಣಾಗುಂದಿ, ಬಿಜೆಪಿ ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.