ಶಹಾಪುರ: ಬೆಂಗಳೂರಿನಲಿ ನಿಧನರಾದ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಹಿರೇಮಠದ ಪೀಠಾಧಿಪತಿ ವೀರಮಹಾಂತ ಶಿವಾಚಾರ್ಯರರ ಪಾರ್ಥೀವ ಶರೀರದ ಅಂತ್ಯಕ್ರಿಯೆಯು ಧಾರ್ಮಿಕ ವಿಧಿ ವಿಧಾನದಂತೆ ಶ್ರೀಮಠದ ಆವರಣದಲ್ಲಿ ಗುರುವಾರ ಸಂಜೆ ನೆರವೇರಿತು. ಭಕ್ತರು ಮತ್ತು ವಿವಿಧ ಮಠಾಧೀಶರು ಭಾಗಿಯಾಗಿದ್ದರು. ಇದಕ್ಕೂ ಮುನ್ನ ಅಲಂಕೃತ ವಾಹನದಲ್ಲಿ ಶ್ರೀಗಳ ಪಾರ್ಥೀವ ಶರೀರದ ಮೆರವಣಿಗೆ ನಡೆಯಿತು.
ಕಂಬನಿ ಮಿಡಿದ ಭಕ್ತ ಸಾಗರ: 1998 ರಲ್ಲಿ ಶ್ರೀವೀರಮಹಾಂತ ಶಿವಾಚಾರ್ಯರು ಶ್ರೀಮಠದ ಪೀಠಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. 25 ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸಿ ಭಕ್ತರ ಮನ ಗೆದ್ದಿದ್ದರು. ಶ್ರೀಮಠದ ಜೀರ್ಣೋದ್ಧಾರ, ಪ್ರವಚನ, ಉಚಿತ ಸಾಮೂಹಿಕ ವಿವಾಹ, ಜಾತ್ರೆ, ರಥೋತ್ಸವ ಮತ್ತು ಧಾರ್ಮಿಕ ಕಾರ್ಯ ನಡೆಸಿದ್ದರು.
ಈ ಸಂದರ್ಭದಲ್ಲಿ ರಂಭಾಪುರಿ ಶ್ರೀ, ದೇವಾಪುರದ ಜಯಶಾಂತಲಿಂಗೇಶ್ವರ ಶಿವಾಚಾರ್ಯ, ಅಬ್ಬೆತುಮಕೂರ ಶ್ರೀಗಳು, ಕಡಕೋಳದ ಡಾ.ರುದ್ರಮುನಿ ಶಿವಾಚಾರ್ಯ, ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯ, ದೋರನಹಳ್ಳಿಯ ಚಿಕ್ಕಮಠದ ಶಿವಲಿಂಗರಾಜೇಂದ್ರ ಶಿವಾಚಾರ್ಯ, ಏಕದಂಡಗಿಮಠದ ಕಾಳಹಸ್ತೇಂದ್ರ ಮತ್ತು ಅಜೇಂದ್ರ ಸ್ವಾಮೀಜಿ, ಕಲಬುರಗಿಯ ಗಿರೆಯಪ್ಪ ಮುತ್ಯಾ, ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯ, ಮಡ್ನಾಳದ ಮಲ್ಲಿಕಾರ್ಜುನ ಮುತ್ಯಾ, ಗದ್ದುಗೆಯ ಬಸವಯ್ಯ ಶರಣ, ಬಾರಜ್ಯೋತಿರ್ಲಿಂಗ ದೇವಸ್ಥಾನದ ವಿಶ್ವರಾಧ್ಯ ಸ್ವಾಮೀಜಿ ಸೇರಿದಂತೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ, ಚಂದ್ರಶೇಖರ ಮಾಗನೂರ ಆಗಮಿಸಿ ದರ್ಶನ ಪಡೆದರು. ಮಾಜಿ ಶಾಸಕ ಗುರು ಪಾಟೀಲ್, ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ, ಡಾ.ಚಂದ್ರಶೇಖರ ಸುಬೇದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.