ADVERTISEMENT

ಕಣ್ವಮಠಕ್ಕೆ ಇಬ್ಬರ ಉತ್ತರಾಧಿಕಾರಿಗಳ ಹೆಸರು ಸೂಚನೆ

ಕಣ್ವ ಮಠದಲ್ಲಿ ಶುಕ್ರವಾರ ವಿಪ್ರರ ಸಭೆ, ರಾಮಮೂರ್ತಿ ನೇಮಕಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:08 IST
Last Updated 11 ಅಕ್ಟೋಬರ್ 2019, 20:08 IST

ಯಾದಗಿರಿ: ಕಕ್ಕೇರಾ ಸಮೀಪದ ಹುಣಸಿಹೊಳೆ ಕಣ್ವ ಮಠದಲ್ಲಿ ಶುಕ್ರವಾರ ವಿಪ್ರರ ಸಭೆ ನಡೆದಿದ್ದು, ಮಠದ ಉತ್ತರಾಧಿಕಾರಿ ಸ್ಥಾನಕ್ಕೆ ಹೊಸಪೇಟೆ–ಮುಂಡರಗಿಯ ರಾಮಚಾರ್ಯ ಮತ್ತು ಯಲಹಂಕ ಮೂಲದ ರವೀಂದ್ರ ಆಚಾರ್ಯ ಇಳಕಲ್ ಅವರ ಹೆಸರನ್ನು ಸುರಪುರ ಸಂಸ್ಥಾನಕ್ಕೆ ಕಳುಹಿಸಲಾಗಿದೆ.

ಇದರ ಮೂಲಕ ರಾಯಚೂರು ಜಿಲ್ಲೆಯ ಮಸ್ಕಿ ಸಮೀಪದ ಬುದ್ದನ್ನಿ ಮಠದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಿರಗುಪ್ಪದ ರಾಮಮೂರ್ತಿ ಅವರ ನೇಮಕಕ್ಕೆ ವಿರೋಧ ವ್ಯಕ್ತವಾಗಿದೆ. ಅವರ ಹೆಸರನ್ನು ಕೈ ಬಿಡಲಾಗಿದೆ.

ಸುರಪುರ ಸಂಸ್ಥಾನದ ನಾಯಕರು ಕಣ್ವ ಮಠದಮಾರ್ಗದರ್ಶಕರಾಗಿದ್ದು ಅವರ ಸಲಹೆಯಂತೆ ಮುನ್ನಡೆಯಲು ತೀರ್ಮಾನಿಸಲಾಯಿತು.ಸುರಪುರ, ಸಿಂಧನೂರು, ಗಂಗಾವತಿ, ಲಿಂಗಸುಗೂಸೂರು ಸೇರಿದಂತೆ ವಿವಿಧ ಜಿಲ್ಲೆಗಳ ವಿಪ್ರರು ಭಾಗವಹಿಸಿದ್ದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.