ADVERTISEMENT

ಯಾದಗಿರಿ: ಸಂಚಾರ ಭಣ ಭಣ

ಅಯೋಧ್ಯೆ ತೀರ್ಪು, ಎರಡನೇ ಶನಿವಾರ ಎಫೆಕ್ಟ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 15:17 IST
Last Updated 9 ನವೆಂಬರ್ 2019, 15:17 IST
ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಯಾದಗಿರಿಯ ವೀರಶೈವ ಕಲ್ಯಾಣ ಮಂಟದ ರಸ್ತೆ ಬಿಕೋ ಎನ್ನುತ್ತಿತ್ತು
ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಯಾದಗಿರಿಯ ವೀರಶೈವ ಕಲ್ಯಾಣ ಮಂಟದ ರಸ್ತೆ ಬಿಕೋ ಎನ್ನುತ್ತಿತ್ತು   

ಯಾದಗಿರಿ: ನ.9 ರಂದು ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಗರದಾದ್ಯಂತ ಕಟ್ಟೆಚ್ಚರ ವಹಿಸಿದ್ದರು. ಇದು ಅಲ್ಲದೇಎರಡನೇ ಶನಿವಾರ ಆಗಿದ್ದ ಕಾರಣ ಬಹುತೇಕ ಅಂಗಡಿ ಮುಂಗಟ್ಟು ಭಣಗುಡುತ್ತಿರುವುದು ಕಂಡು ಬಂದಿತು.

ಬ್ಯಾಂಕ್‌ಗಳು, ಅಂಚೆ ಕಚೇರಿ, ಸರ್ಕಾರಿ ಕಚೇರಿಗಳಿಗೆ ರಜೆ ಇದ್ದವು. ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಸರ್ಕಾರ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ನಗರದ ಪ್ರಮುಖ ರಸ್ತೆ, ವೃತ್ತ, ಬಸ್‌ ನಿಲ್ದಾಣ, ಸುಭಾಷ್ ವೃತ್ತಗಳಲ್ಲಿ ಬಿಗಿ ಭದ್ರತೆ ವಹಿಸಲಾಗಿತ್ತು. ಎಂದಿನಂತೆ ಬಸ್‌ ಸಂಚಾರ ಸುಗಮವಿದ್ದರೂ ಪ್ರಯಾಣಿಕರು ಕಂಡು ಬರಲ್ಲಿಲ್ಲ.

ADVERTISEMENT

ಪೊಲೀಸರ ಕಟ್ಟುನಿಟ್ಟಿನ ಸೂಚನೆಯಂತೆ ನಗರದಲ್ಲಿ ಜನರು ಗುಂಪು ಗುಂಪಾಗಿ ನಿಂತು ಚರ್ಚಿಸುತ್ತಿರುವುದು ಕಂಡು ಬರಲ್ಲಿಲ್ಲ. ಪೊಲೀಸರು ಬಂದೋಬಸ್ತ್‌ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.