ADVERTISEMENT

ಯಾದಗಿರಿ: ನಿಧಿ ಆಸೆಗೆ ಗರುಡಗಂಬ ಧ್ವಂಸ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 7:20 IST
Last Updated 15 ಅಕ್ಟೋಬರ್ 2018, 7:20 IST
ಶಹಾಪುರ ರಸ್ತೆಯಲ್ಲಿರುವ ಸೀಬರ್ ಮಲ್ಲಯ್ಯನ ದೇವಸ್ಥಾನದ ಗರುಡಗಂಬ ಧ್ವಂಸಗೊಂಡಿರುವುದು
ಶಹಾಪುರ ರಸ್ತೆಯಲ್ಲಿರುವ ಸೀಬರ್ ಮಲ್ಲಯ್ಯನ ದೇವಸ್ಥಾನದ ಗರುಡಗಂಬ ಧ್ವಂಸಗೊಂಡಿರುವುದು   

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಸಗರ ಗ್ರಾಮದ ಹೊರವಲಯದಲ್ಲಿ ಭಾನುವಾರ ರಾತ್ರಿ ನಿಧಿ ಆಸೆಗಾಗಿ ದೇಗುಲದ ಗರುಡಗಂಬವನ್ನು ಕಳ್ಳರು ಕಿತ್ತು ಎಸೆದಿದ್ದಾರೆ.

ಶಹಾಪುರ ರಸ್ತೆಯಲ್ಲಿರುವ ಸೀಬರ್ ಮಲ್ಲಯ್ಯನ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.

ಗರುಡಗಂಬದ ಅಡಿ ನಿಧಿ ಇಟ್ಟಿರುತ್ತಾರೆ ಎಂಬ ಸಾಮಾನ್ಯ ವದಂತಿಗೆ ಕಿವಿಗೊಟ್ಟಿರುವ ಕಳ್ಳರು ಗರುಡಗಂಬ ಕಿತ್ತು ನಿಧಿ ಹುಡುಕಿದ್ದಾರೆ. ಆದರೆ, ಗರುಡಗಂಬದ ಅಡಿ ಏನೂ ಸಿಕ್ಕಿಲ್ಲ ಎಂಬುದಾಗಿ ಗ್ರಾಮಸ್ಥರು ತಿಳಿಸಿದರು.

ADVERTISEMENT

ವೃಥಾ ದೇಗುಲದ ಗರುಡಗಂಬ ಕಿತ್ತೆಸೆದಿರುವುದರಿಂದ ಬೇಸರಗೊಂಡಿರುವ ಗ್ರಾಮಸ್ಥರು ಕಳ್ಳರ ಬಂಧನಕ್ಕೆ ಆಗ್ರಹಿಸಿದ್ದಾರೆ. ಕೆಲ ಮೂಢನಂಬಿಕೆಗಳಿಂದ ದೇಗುಲಗಳು ಹಾಳಾಗುವುದನ್ನು ತಪ್ಪಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಆದರೆ, ಈ ಕುರಿತು ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.