
ಯಾದಗಿರಿ: ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ಕೆಲವು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶರೆಡ್ಡಿ ಮುದ್ನಾಳ ಅವರು ಶಾಂತರಾಜ ಮೋಟ್ನಳ್ಳಿ, ಸುಭಾಷ್ ಹೆಡಗಿಮದ್ರಾ, ಭಾಗಪ್ಪ ದೇವದುರ್ಗ, ಚಂದ್ರು ಜಕಾತಿ, ನಾಗಪ್ಪ ವಿಶ್ವಕರ್ಮ, ರಾಜು ಜಕಾತಿ, ಮಹೇಶ್ ಬುಡಾಯ್ನೂರ್, ಹನುಮಂತ ಹಾರಗೇರಾ ಸೇರಿ ಇತರರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.
ಮುಖಂಡರಾದ ಖಂಡಪ್ಪ ದಾಸನ್, ಲಿಂಗಣ್ಣ ಹತ್ತಿಮನಿ, ಪರಶುರಾಮ ಕುರುಕುಂದಿ, ನಾಗಪ್ಪ ಬೆನಕಲ್, ಮಲ್ಲಿಕಾರ್ಜುನ ಕುರುಕುಂಬಳ, ಶಿವಣ್ಣ ವಿಶ್ವಕರ್ಮ, ಬಸನಗೌಡ ನಾಯ್ಕಲ್, ಲಕ್ಷ್ಮಿಪುತ್ರ ಮಾಲಿ ಪಾಟೀಲ, ಮಾರುತಿ ಕಲಾಲ್, ಚನ್ನವೀರಯ್ಯ ಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ್ ಕಟ್ಟಿಮನಿ ಸೇರಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.