ADVERTISEMENT

ಪ್ರಜಾವಾಣಿ ಕ್ವಿಜ್‌

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಪ್ರಜಾವಾಣಿ ಕ್ವಿಜ್‌
ಪ್ರಜಾವಾಣಿ ಕ್ವಿಜ್‌   

1. ಇತ್ತೀಚೆಗೆ ನಿಧನರಾದ ’ನಾಸು’ ಕಾದಂಬರಿಯ ಲೇಖಕಿ ಯಾರು?
(ಅ) ಟಿ. ಸುನಂದಮ್ಮ
(ಆ) ಸುನಂದ ಬೆಳಗಾಂವ್‌ಕರ
(ಇ) ಸುನಂದಾಬಾಯಿ(ಈ) ಸುನಂದಾದೇವಿ

2. ಎಚ್‌. ಡಿ. ದೇವೇಗೌಡರವರ ಜೀವನಕಥನದ ಹೆಸರು ಇದು:
(ಅ) ಸಾಧನೆಯ ಹಾದಿಯಲ್ಲಿ
(ಆ) ಸಾಧನಾ ಪಥ
(ಇ) ಸಾಧನ ಶೃಂಗ
(ಈ) ಸಾಧನೆಯ ಶಿಖರಾರೋಹಣ

3. ತಮಿಳುನಾಡಿನಲ್ಲಿ ಪಟಾಕಿ ಉತ್ಪಾದನೆಗೆ ಪ್ರಸಿದ್ಧವಾದ ಸ್ಥಳ ಯಾವುದು?
(ಅ) ಶಿವಕಾಶಿ
(ಆ) ಮದುರೈ
(ಇ) ರಾಮೇಶ್ವರಂ
(ಈ) ಕೊಯಮತ್ತೂರು

ADVERTISEMENT

4. ಕರ್ನಾಟಕ ಸರ್ಕಾರವು ಈ ದೇಶದಿಂದ ಮರಳನ್ನು ಆಮದು ಮಾಡಿಕೊಳ್ಳಲಿದೆ:
(ಅ) ಕೊರಿಯಾ (ಆ) ಥೈಲ್ಯಾಂಡ್ (ಇ) ಮಲೇಷಿಯಾ (ಈ) ಸಿಂಗಪುರ್

5. ಡಾ. ಮನಮೋಹನ ಅತ್ತಾವರ್ ಈ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ
(ಅ) ಹೈನುಗಾರಿಕೆ (ಆ) ವೈದ್ಯಕೀಯ (ಇ) ಭೌತಶಾಸ್ತ್ರ (ಈ) ಕೃಷಿ ಮತ್ತು ತೋಟಗಾರಿಕೆ

6. ಭಾರತದ ಮೊತ್ತಮೊದಲ ’ಬ್ರಾಂಡ್ ಲೋಗೋ’ ಪಡೆದ ನಗರ
(ಅ) ಮುಂಬೈ (ಆ) ಬೆಂಗಳೂರು (ಇ) ದೆಹಲಿ (ಈ) ಕಲ್ಕತ್ತ

7. ಲಾಲೂಪ್ರಸಾದ್ ಯಾದವ್ ಈ ರಾಜಕೀಯ ಪಕ್ಷಕ್ಕೆ ಸೇರಿದವರು:
(ಅ) ರಾಷ್ಟ್ರೀಯ ಜನತಾದಳ
(ಆ) ರಾಷ್ಟ್ರೀಯ ಜಾಗೃತಿದಳ
(ಇ) ರಾಜ್ಯ ಜನತಾದಳ
(ಈ) ರಾಷ್ಟ್ರೀಯ ಜನದಳ

8. ಪ್ರಸ್ತುತ ವಿವಾದದಲ್ಲಿರುವ ಹಣಕಾಸು ವ್ಯವಸ್ಥೆ?
(ಅ) ಷೇರು ಮಾರುಕಟ್ಟೆ (ಆ) ಬಿಟ್‌ಕಾಯಿನ್ (ಇ) ವರ್ಲ್ಡ್ ಬ್ಯಾಂಕ್ (ಈ) ಯೂರೋ

9. ಗೂಢಚರ್ಯೆಯ ಆಪಾದನೆಯನ್ನು ಎದುರಿಸುತ್ತಿರುವ ಕುಲಭೂಷಣ್ ಜಾಧವ್ ಸೇವೆ ಸಲ್ಲಿಸುತ್ತಿದ್ದ ವಿಭಾಗ ಯಾವುದು?
(ಅ) ಭೂಸೇನೆ (ಆ) ವಾಯುಸೇನೆ (ಇ) ಪೊಲೀಸ್ (ಈ) ನೌಕಾಪಡೆ

10. ಕವಿ ಗೋಪಾಲಕೃಷ್ಣ ಅಡಿಗರು ಸಂಪಾದಿಸುತ್ತಿದ್ದ ಪತ್ರಿಕೆ ಯಾವುದು?
(ಅ) ಸಂಕ್ರಮಣ (ಆ) ಸಾಕ್ಷಿ
(ಇ) ರುಜುವಾತು (ಈ) ಮನ್ವಂತರ

ಹಿಂದಿನ ಸಂಚಿಕೆಯ ಸರಿಯುತ್ತರಗಳು:
1. ಆ) ಕ್ರಿಕೆಟ್, 2. ಇ) ಮಯೂರ ವರ್ಮ, 3. ಈ) ಟಿ.ಕೆ. ರಾಮರಾವ್, 4. ಆ) ಪಕ್ಷಿಶಾಸ್ತ್ರ, 5. ಆ) ಪಾರ್ಸಿ, 6. ಅ) ಜಮೈಕಾ, 7. ಈ) ಮಲಯಾಳಂ, 8. ಆ) ಭಯ, 9. ಈ) ಬಾದಾಮಿ, 10. ಆ) ಮೆಂಡಲೀಫ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.