1. ‘ಪ್ರಧಾನ ಮಂತ್ರಿ ಶ್ರಮ ಪ್ರಶಸ್ತಿ’ಯನ್ನು ಕೇಂದ್ರ ಸರ್ಕಾರದ ಯಾವ ಇಲಾಖೆ ನೀಡುತ್ತದೆ?
ಅ) ಕೃಷಿ ಆ) ಕಾರ್ಮಿಕ
ಇ) ಹಣಕಾಸು ಈ) ರಕ್ಷಣೆ
2. ಕದನ ಕುತೂಹಲ ರಾಗದ ಅತಿ ಪ್ರಸಿದ್ಧ ರಚನೆ ಯಾವುದು?
ಅ) ಎಂದರೋ ಮಹಾನುಭಾವುಲು
ಆ) ಕ್ಷೀರಸಾಗರ ವಿಹಾರ
ಇ) ರಘುವಂಶ ಸುಧಾಂಬುಧಿ
ಈ)ಭಾಗ್ಯದ ಲಕ್ಷ್ಮಿ ಬಾರಮ್ಮ
3. ದಕ್ಷಿಣ ಅಮೆರಿಕದ ಅತಿ ಚಿಕ್ಕ ದೇಶ ಯಾವುದು?
ಅ) ಸುರಿನಾಮ್ ಆ) ಗಯಾನ
ಇ) ಉರುಗ್ವೆ ಈ) ಈಕ್ವೆಡಾರ್
4. ಚಿರಂಜೀವಿ ಸಿಂಗ್ ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ?
ಅ) ಕ್ರೀಡೆ ಆ) ವಿಜ್ಞಾನ
ಇ) ಆಡಳಿತ ಈ) ಪತ್ರಿಕೋದ್ಯಮ
5. ಇವುಗಳಲ್ಲಿ ಬರಿಗಣ್ಣಿಗೆ ಕಾಣುವ ಗ್ರಹ ಯಾವುದು?
ಅ) ಮಂಗಳ ಆ) ಯುರೇನಸ್
ಇ) ನೆಪ್ಚೂನ್ ಈ) ಯಾವುದೂ ಅಲ್ಲ
6. ವಿಂಧ್ಯ-ಸಾತ್ಪುರ ಪರ್ವತ ಶ್ರೇಣಿಗಳ ಮಧ್ಯೆ ಹರಿಯುವ ನದಿ ಯಾವುದು?
ಅ) ತಪತಿ ಆ) ಚಂಬಲ್
ಇ) ನರ್ಮದಾ ಈ) ಸೋನೆ
7. ವನಸ್ಪತಿ ತುಪ್ಪದ ತಯಾರಿಕೆಯಲ್ಲಿ ಬಳಸುವ ಅನಿಲ ಯಾವುದು?
ಅ) ಆಮ್ಲಜನಕ ಆ) ಹೀಲಿಯಂ
ಇ) ಸಾರಜನಕ ಈ) ಜಲಜನಕ
8. ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಯಾರು ಬರೆದ ಕೃತಿ?
ಅ) ಎಂ.ಎಂ.ಕಲಬುರ್ಗಿ ಆ) ಷ. ಷಟ್ಟರ್ ಇ) ಎಂ. ಚಿದಾನಂದ ಮೂರ್ತಿ
ಈ) ಆರ್. ಸಿ. ಹಿರೇಮಠ
9. ವಿಶ್ವಕಪ್ ಕ್ರಿಕೆಟ್ ಯಾವ ವರ್ಷ ಆರಂಭವಾಯಿತು?
ಅ) 1975 ಆ) 1970
ಇ) 1974 ಈ) 1985
10. ‘ಸರ್ವದಮನ’ ಎಂದೂ ಹೆಸರಿದ್ದ ಪೌರಾಣಿಕ ವ್ಯಕ್ತಿ ಯಾರು?
ಅ) ರಾಮ ಆ) ಭೀಮ
ಇ) ಅರ್ಜುನ ಈ) ಭರತ
ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ಬಿಎಂಶ್ರೀ 2. ಲೋಕಲ್ ಏರಿಯಾ ನೆಟ್ವರ್ಕ್ 3. ಶಿಸ್ತು 4. ಬಿಹಾರ
5. ಬಸ್ಟರ್ಡ್ 6. ಭಾರತ- ಭಾರತಿ ಪುಸ್ತಕ ಸಂಪದ 7.ರಮೇಶ್ ಸಿಪ್ಪಿ 8. ಮಾಲತೇಶ 9. ಸುಮೋ 10. ರಾಶಿ
ಎಸ್. ಎಲ್. ಶ್ರೀನಿವಾಸಮೂರ್ತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.