ADVERTISEMENT

ನಗರಸಭೆ ಸದಸ್ಯ ಗಡಿಪಾರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 16:44 IST
Last Updated 23 ಮಾರ್ಚ್ 2019, 16:44 IST

ಚಿತ್ರದುರ್ಗ: ಖೋಟಾ ನೋಟು ಜಾಲದಲ್ಲಿ ಸಿಕ್ಕಿ ಬಿದ್ದು ಜಾಮೀನು ಮೇಲೆ ಬಿಡುಗಡೆ ಆಗಿದ್ದ ನಗರಸಭೆ ಜೆಡಿಎಸ್ ಸದಸ್ಯ ಎನ್. ಚಂದ್ರಶೇಖರ್ ಅಲಿಯಾಸ್ ಖೋಟಾ ನೋಟು ಚಂದ್ರನನ್ನು ಜಿಲ್ಲಾಧಿಕಾರಿ ಗಡಿಪಾರು ಮಾಡಿದ್ದಾರೆ.

ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಜಿಲ್ಲೆಯಿಂದ ಹೊರಗೆ ಇರಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಆದೇಶ ಹೊರಡಿಸಿದ್ದಾರೆ.

ಚಂದ್ರಶೇಖರ್‌, ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ನಗರಸಭೆಗೆ 4ನೇ ವಾರ್ಡ್‌ನಿಂದ ಆಯ್ಕೆ ಆಗಿದ್ದರು. ಖೋಟಾ ನೋಟು ಬಳಕೆ ಸೇರಿ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.