ADVERTISEMENT

ಅರ್ಚಕರ ಮನೇಲಿ ದ್ರಾಕ್ಷಿ,ಗೋಡಂಬಿ ಸಿಕ್ಕಿರಬೇಕು: ಐಟಿ ದಾಳಿಗೆ ಸಚಿವ ರೇವಣ್ಣ ಲೇವಡಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 15:26 IST
Last Updated 12 ಏಪ್ರಿಲ್ 2019, 15:26 IST
   

ಹಾಸನ: ಹರದನಹಳ್ಳಿ ಈಶ್ವರ ದೇವಾಲಯದ ಅರ್ಚಕರ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳಿಗೆ ದ್ರಾಕ್ಷಿ, ಗೋಡಂಬಿ ಸಿಕ್ಕಿರಬೇಕು ಎಂದು ಸಚಿವ ಎಚ್.ಡಿ.ರೇವಣ್ಣ ಲೇವಡಿ ಮಾಡಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಐಟಿ ದಾಳಿ ಮಾಡಲಿ ಬಿಡಿ. ಅವರ ಕೆಲಸ ಮಾಡುತ್ತಿದ್ದಾರೆ. ಈಶ್ವರನ ಮೇಲಾದರೂ ಮಾಡಲಿ, ಅರ್ಚಕರ ಮೇಲಾದರೂ ದಾಳಿ ಮಾಡಲಿ. ಅರ್ಚಕರ ಮನೆಯಲ್ಲಿ ಏನು ಮಹಾ ಸಿಕ್ಕಿರಲು ಸಾಧ್ಯ. ಗೋಡಂಬಿ, ದ್ರಾಕ್ಷಿ ಸಿಕ್ಕಿರಬೇಕು ಅಷ್ಟೇ ಎಂದು ಅಪಹಾಸ್ಯ ಮಾಡಿದರು.

ದೇವೇಗೌಡರಿಗೆ ಮಕ್ಕಳು, ಸೊಸೆಯಂದಿರು ಊಟ ಹಾಕಿಲ್ಲ ಎಂಬ ಎ.ಮಂಜು ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರ ಅಪ್ಪ, ಅವ್ವನನ್ನ ಸರಿಯಾಗಿ ನೋಡಿಕೊಳ್ಳಲಿ. ನಮ್ಮ ತಂದೆ, ತಾಯಿ ನೋಡಿಕೊಳ್ಳುವುದು ಗೊತ್ತು. ನನ್ನ ಬಾಯಲ್ಲಿ ಅವನ ಹೆಸರು ಏಕೆ ಹೇಳುಸುತ್ತೀರಾ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.