ADVERTISEMENT

ಜೇಟ್ಲಿ ವಿರುದ್ಧ ಆಯೋಗಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2014, 19:30 IST
Last Updated 14 ಏಪ್ರಿಲ್ 2014, 19:30 IST

ಅಮೃತಸರ (ಪಿಟಿಐ): ಇಲ್ಲಿನ ಲೋಕ­ಸಭಾ ಕ್ಷೇತ್ರ­ದಿಂದ ಬಿಜೆಪಿ ಅಭ್ಯರ್ಥಿ­ಯಾಗಿ ಸ್ಪರ್ಧಿಸುತ್ತಿರುವ  ಅರುಣ್‌ ಜೇಟ್ಲಿ ಅವರು ಮನೆ ಖರೀದಿಸಿರು­ವುದು ವಿವಾದ ಸೃಷ್ಟಿಸಿದ್ದು, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಮರಿಂದರ್‌ ಸಿಂಗ್‌ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

‘ಚುನಾವಣಾ ಪ್ರಚಾರದ ಭಾಗವಾಗಿ  ಜೇಟ್ಲಿ ಅಮೃತಸರದಲ್ಲಿ ಮನೆ ಖರೀದಿಸಿದ್ದಾರೆ’ ಎಂದು ಅಮರಿಂದರ್‌ ಸಿಂಗ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಜನರು ಜೇಟ್ಲಿ ಅವರನ್ನು ‘ಹೊರಗಿನವರು’ ಎಂದು ಪರಿಗಣಿಸುವ ಸಾಧ್ಯತೆ ಇರುವುದರಿಂದ ಅವರು ಕಳೆದ ವಾರ ಅಮೃತಸರದಲ್ಲಿ ಮನೆ ಖರೀದಿಸಿ­ದ್ದಾರೆ ಎಂದು ಸಿಂಗ್ ದೂರಿದ್ದಾರೆ. ಬಿಜೆಪಿ ಹಿರಿಯ ಮುಖಂಡರಾಗಿರುವ ಅರುಣ್‌ ಜೇಟ್ಲಿ ಅವರು ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.