ADVERTISEMENT

ನಕಲಿ ಮತ ಪತ್ತೆಗೆ ಯೋಗೇಂದ್ರ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 19:30 IST
Last Updated 3 ಏಪ್ರಿಲ್ 2014, 19:30 IST

ಗುಡಗಾಂವ್‌ (ಐಎಎನ್‌ಎಸ್): ಕ್ಷೇತ್ರ­ದಲ್ಲಿರುವ ನಕಲಿ ಮತಗಳ ಬಗ್ಗೆ ಚುನಾವಣಾ ಆಯೋಗವು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಗುಡಗಾಂವ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯೋಗೇಂದ್ರ ಯಾದವ್‌ ಅವರು ಗುರುವಾರ ಮನವಿ ಮಾಡಿದ್ದಾರೆ.

‘ಗುಡಗಾಂವ್‌ನಲ್ಲಿ ನಕಲಿ ಮತಗಳ ದೊಡ್ಡ ಜಾಲವೇ ಇದೆ. ಹರಿಯಾಣದ ಕ್ರೀಡೆ ಮತ್ತು ಯುವಜನ ಸಚಿವ ಸುಖ್‌ಬೀರ್‌ ಸಿಂಗ್‌ ಕಠಾರಿಯಾ ಅವರು ಇಂತಹ ಕುತಂತ್ರಗಳಿಗೆ ಕುಖ್ಯಾತಿ ಪಡೆದಿ­ದ್ದಾರೆ ಮತ್ತು ಈ ಸಂಬಂಧ ಕ್ರಿಮಿನಲ್‌ ಮೊಕದ್ದಮೆ­ಗಳನ್ನೂ ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.