ತಿರುವನಂತಪುರ (ಪಿಟಿಐ): ಹಲವು ಕೋಟ್ಯಧಿಪತಿಗಳು ಸಂಸತ್ ಪ್ರವೇಶಿಸುವ ಕನಸು ಕಾಣುತ್ತಿರುವಾಗ ಕೇವಲ ₨750 ಮೌಲ್ಯದ ಆಸ್ತಿ ಹೊಂದಿರುವ ವ್ಯಕ್ತಿಯೊಬ್ಬರು ಕೇರಳದಲ್ಲಿ ಚುನಾವಣೆ ಅಖಾಡಕ್ಕಿಳಿದಿದ್ದಾರೆ.
ಏಪ್ರಿಲ್ 10ರಂದು ನಡೆಯಲಿರುವ ಚುನಾವಣೆಗೆ ಕೊಟ್ಟಾಯಂ ಕ್ಷೇತ್ರದಿಂದ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) (ಎಸ್ಯುಸಿಐ) ಪಕ್ಷದಿಂದ ಸ್ಪರ್ಧಿಸಿರುವ ಬಿಜು ಎಂಬವರು ತಮ್ಮ ಬಳಿ ₨500 ನಗದು ಮತ್ತು ಸ್ಥಳೀಯ ಸಹಕಾರ ಬ್ಯಾಂಕ್ ಖಾತೆಯಲ್ಲಿ ₨250 ಇದೆ ಎಂದು ಪ್ರಮಾಣ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ತಮ್ಮ ಇಲ್ಲವೇ ಪತ್ನಿ ಬಳಿಯಲ್ಲಿ ಯಾವುದೇ ಸ್ಥಿರಾಸ್ತಿ, ವಾಹನ, ಆಭರಣಗಳು ಇಲ್ಲ ಎಂದೂ 46 ವರ್ಷದ ಬಿಜು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಇದೇ ಪಕ್ಷದ ತಿರುವನಂತಪುರ ಅಭ್ಯರ್ಥಿ ಷಾಜರ್ ಖಾನ್ ಅವರು, ತಮ್ಮ ಆಸ್ತಿ ಮೌಲ್ಯ ₨1,500 ಎಂದು ಘೋಷಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.