ADVERTISEMENT

ಏಳು ಪಕ್ಷಗಳ ಮೈತ್ರಿಯಲ್ಲಿ ಬಿರುಕು

ಪುದುಚೇರಿಯಿಂದ ಕಣಕ್ಕಿಳಿಯಲು ಮುಂದಾದ ಪಿಎಂಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:32 IST
Last Updated 21 ಮಾರ್ಚ್ 2014, 19:32 IST

ಪುದುಚೇರಿ (ಪಿಟಿಐ): ತಮಿಳುನಾಡಿ­ನಲ್ಲಿ ಬಿಜೆಪಿ ಒಳ­ಗೊಂಡಂತೆ ಏಳು ಪಕ್ಷಗಳ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದು ಕೇವಲ  ಒಂದೇ ದಿನ ಕಳೆಯುವಷ್ಟರಲ್ಲಿ ಬಿರುಕು ಕಾಣಿಸಿ­ಕೊಂಡಿದೆ.

ಕೇಂದ್ರಾಡಳಿತ ಪ್ರದೇಶ ಪುದುಚೇರಿ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಪಿಎಂಕೆ ಶುಕ್ರವಾರ ಘೋಷಿಸಿದೆ. ಆದರೆ, ಇಲ್ಲಿಂದ ಈಗಾಗಲೇ ಎಐಎನ್‌ಆರ್‌ಸಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಈ ಎರಡೂ ಪಕ್ಷಗಳು ಏಳು ಪಕ್ಷಗಳ ಮೈತ್ರಿಕೂಟದ ಭಾಗವಾಗಿವೆ. ಪಿಎಂಕೆಯ ಈ ನಡೆಯಿಂದ ಮೈತ್ರಿಕೂಟ ಮುಜುಗರಕ್ಕೊಳಗಾಗುವಂತಾಗಿದೆ.

ಪಿಎಂಕೆ ಪುದುಚೇರಿ ಘಟಕದ ಸಂಘಟಕ ಮತ್ತು ಮಾಜಿ ಶಾಸಕ ಆರ್‌.ಕೆ.ಆರ್‌. ಆನಂದ್‌ರಾಮನ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸುವು­ದಾಗಿ ಘೋಷಿಸಿದ್ದಾರೆ. ‘ಅನಗತ್ಯ ಗೊಂದಲ ಮತ್ತು ಮುಜುಗರಕ್ಕೆ ಎಡೆಮಾಡಿಕೊಡುವುದು ಬೇಡ’ ಎಂದು ಪುದುಚೇರಿ ಬಿಜೆಪಿ ಘಟಕದ ಅಧ್ಯಕ್ಷ ಎಂ. ವಿಶ್ವೇಶ್ವರನ್‌ ಹೇಳಿದ್ದಾರೆ.

ಈ ಕುರಿತು ಆನಂದ್‌ರಾಮನ್‌ ಅವರೊಂದಿಗೆ ಚರ್ಚಿಸಿ ಅವರ ಮನವೊಲಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರು ಗುರುವಾರ ಚೆನ್ನೈನಲ್ಲಿ ಏಳು ಪಕ್ಷಗಳ ಮೈತ್ರಿಕೂಟ­ವನ್ನು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.