ADVERTISEMENT

ತಮಿಳರ ಪರ ಹೋರಾಟದ ಪ್ರಣಾಳಿಕೆ

ಸೇತುಸಮುದ್ರಂ, ಸಾಲ ಮನ್ನಾ ಡಿಎಂಕೆ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST
ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಚೆನ್ನೈನಲ್ಲಿ ಮಂಗಳವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು 	–ಪಿಟಿಐ ಚಿತ್ರ
ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಚೆನ್ನೈನಲ್ಲಿ ಮಂಗಳವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು –ಪಿಟಿಐ ಚಿತ್ರ   

ಚೆನ್ನೈ (ಪಿಟಿಐ): ಯಾವುದೇ ರಾಷ್ಟ್ರೀಯ ಪಕ್ಷಗಳ ಜೊತೆಗೆ ಹೊಂದಾಣಿಕೆ ಇಲ್ಲದೆಯೂ ತಮಿಳುನಾಡಿನಲ್ಲಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವನ್ನು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ವ್ಯಕ್ತಪಡಿಸಿದ್ದಾರೆ.

ಮತದಾರರಿಗೆ ಉಚಿತ ಕೊಡುಗೆಗಳ ಎಐಎಡಿಎಂಕೆ ಪ್ರಣಾಳಿಕೆಗಿಂತ ಭಿನ್ನ­ವಾಗಿ ಜಗತ್ತಿನಾದ್ಯಂತ ಇರುವ ತಮಿಳರ ಏಳಿಗೆಗಾಗಿ ಶ್ರಮಿಸುವ ಭರವಸೆಯ ಪ್ರಣಾಳಿಕೆಯನ್ನು ಕರುಣಾನಿಧಿ ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಆದಾಯ ತೆರಿಗೆ ಮಿತಿಯನ್ನು ಪುರು­ಷರಿಗೆ ₨ ಆರು ಲಕ್ಷ ಮತ್ತು ಮಹಿಳೆ­ಯರಿಗೆ ₨ 7.20 ಲಕ್ಷಕ್ಕೆ ಏರಿಸುವಂತೆ ಮುಂದೆ ರಚನೆಯಾಗುವ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಭರವಸೆಯನ್ನು ಡಿಎಂಕೆ ನೀಡಿದೆ. ತಮಿಳರು ಗಣನೀಯ ಪ್ರಮಾಣ­ದಲ್ಲಿರುವ ವಿವಿಧ ದೇಶಗಳಲ್ಲಿ ತಮಿಳು ರಾಯಭಾರಿ ನೇಮಕವೂ ಪ್ರಣಾಳಿಕೆಯಲ್ಲಿ ಸೇರಿದೆ.

ಡಿಎಂಕೆಯ ನೆಚ್ಚಿನ ಸೇತುಸಮುದ್ರಂ ಯೋಜನೆ, ಜಾತಿ ರಹಿತ, ಸಮ ಸಮಾ­ಜಕ್ಕಾಗಿ ಎಲ್ಲ ಜಾತಿ, ಧರ್ಮ­ಗಳ ಜನರಿಗೆ ವಸತಿ ಬಡಾವಣೆ­ ನಿರ್ಮಾಣಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುವ ಭರವಸೆಯನ್ನೂ ಪ್ರಣಾಳಿಕೆ ನೀಡಿದೆ. ಎಲ್ಲ ನದಿಗಳ ರಾಷ್ಟ್ರೀಕರಣ ಮತ್ತು ಜೋಡಣೆ, ಶಿಕ್ಷಣ ಮತ್ತು ಕೃಷಿ ಸಾಲ ಮನ್ನಾ, ಮೀನುಗಾರರಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ ಡಿಎಂಕೆಯ ಇತರ ಭರವಸೆಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.