ADVERTISEMENT

‘ಕೋಮುವಾದಿಗಳಿಗೆ, ನಾಸ್ತಿಕರಿಗೆ ಮತ ಬೇಡ’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:50 IST
Last Updated 9 ಮಾರ್ಚ್ 2014, 19:50 IST

ತ್ರಿಶೂರ್(ಪಿಟಿಐ): ಕೇರಳದಲ್ಲಿ ಏಪ್ರಿಲ್‌ 10ರಂದು ನಡೆಯುವ ಚುನಾವಣೆಯಲ್ಲಿ ನಾಸ್ತಿಕರಿಗೆ ಮತ್ತು ಕೋಮುವಾದಕ್ಕೆ ಉತ್ತೇಜನ ನೀಡುವವರಿಗೆ ಧಾರ್ಮಿಕ ಶ್ರದ್ಧೆ ಇರುವವರು ಮತ ಹಾಕಬಾರದು ಎಂದು ಕೇರಳ ಕ್ಯಾಥೊಲಿಕ್‌ ಬಿಷಪ್ಪರ ಸಮಿತಿ (ಕೆಸಿಬಿಸಿ) ಕರೆ ನೀಡಿದೆ.

ಮತದಾನಕ್ಕೆ ಸಂಬಂಧಿಸಿದಂತೆ ಏನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ವಿವರಿಸುವ ಪತ್ರವನ್ನು ಕೆಸಿಬಿಸಿ ವ್ಯಾಪ್ತಿಯ ಎಲ್ಲ ಚರ್ಚುಗಳಿಗೆ ಕಳುಹಿಸಿ, ಅಲ್ಲಿ ಓದಿ ಹೇಳಲಾಗಿದೆ.

ಮತದಾನ ಮಾಡುವುದು ರಾಷ್ಟ್ರ ನಿರ್ಮಾಣದ ಕೆಲಸವಾದ್ದರಿಂದ ಮತದಾನದ ಹಕ್ಕು ಇರುವ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ಪತ್ರ ಒತ್ತಾಯಿಸಿದೆ. ಕ್ಯಾಥೊಲಿಕ್‌ ಬಿಷಪ್ಸ್‌ ಕಾನ್ಫರೆನ್ಸ್‌ ಆಫ್‌ ಇಂಡಿಯ ಕೂಡ ಇತ್ತೀಚೆಗೆ ತನ್ನ ಅಧೀನದ ಚರ್ಚ್‌ಗಳಿಗೆ ಇಂತಹುದೇ ಪತ್ರ ಬರೆದಿತ್ತು. ಚರ್ಚ್‌ ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ ಎಂಬುದನ್ನು ಎರಡೂ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.