ADVERTISEMENT

ಮತದಾನದ ಅರಿವಿಗೆ ಮಾನವ ಸರಪಳಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 20:26 IST
Last Updated 23 ಮಾರ್ಚ್ 2014, 20:26 IST

ದೇವನಹಳ್ಳಿ:  ‘ಮತದಾನದ ಹಕ್ಕು ಮತ್ತು ಕರ್ತವ್ಯದ ಕುರಿತು ಪ್ರತಿ­ಯೊಬ್ಬರು ಜಾಗೃತರಾಗಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿರಾಜು ತಿಳಿಸಿದರು.
ದೇವನಹಳ್ಳಿ ನಳಂದ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ನಳಂದ ಶಿಕ್ಷಣ ಸಂಸ್ಥೆ ವತಿಯಿಂದ ಏರ್ಪ­ಡಿಸಿದ್ದ ಮತಜಾಗೃತಿ ಅಭಿಯಾನ ದಲ್ಲಿ ಅವರು ಮಾತನಾಡಿದರು.

ಗ್ರಾಮಾಂ­ತರ ಪ್ರೌಢಶಾಲೆ ಮುಖ್ಯ­ಶಿಕ್ಷಕ ಬಿ.ಎನ್.ಕೃಷ್ಣಪ್ಪ ಮಾತ­ನಾಡಿ­ದರು. ಈ ಸಂದರ್ಭದಲ್ಲಿ ನಳಂದ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ವೆಂಕಟೇಶ್ ಗೌಡ, ಉಪ­ನ್ಯಾಸಕ ಕೃಷ್ಣಮೂರ್ತಿ, ಶಿಕ್ಷಕ ಮಂಜು­ನಾಥ್, ಕೆ.ಎಂ.ಕೃಷ್ಣಮೂರ್ತಿ, ವೈ.ವಿ.­ಚಂದ್ರ­ಶೇಖರ್, ಮುನಿರಾಜು, ಹನು­ಮಂತಪ್ಪ, ಸಿ.ಆರ್.ಪಿ ನಾಗೇಶ್, ಮುನಿ­ವೀರಪ್ಪ, ರವೀಂದ್ರ, ನಾರಾಯಣಸ್ವಾಮಿ ಸೇರಿದಂತೆ  ಮತ್ತಿತರರು ಉಪಸ್ಥಿತರಿ­ದ್ದರು.

ಕಾರ್ಯಕ್ರಮದ ನಂತರ ಕಾಲೇಜು ಆವರಣದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾನವ ಸರಪಳಿ ನಿರ್ಮಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.