ADVERTISEMENT

ಬೆಂಗಳೂರು | ರಾಜಾಜಿನಗರದಲ್ಲಿ ಸುರೇಶ್‌ಕುಮಾರ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಮೇ 2023, 7:45 IST
Last Updated 13 ಮೇ 2023, 7:45 IST
   

ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ರಾಜಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯ ಎಸ್‌.ಸುರೇಶ್‌ಕುಮಾರ್‌ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಪುಟ್ಟಣ್ಣ ಸೋಲು ಕಂಡಿದ್ದಾರೆ.

ಮತ ಎಣಿಕೆ ಆರಂಭದಿಂದಲೂ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಂದು ಸುತ್ತಿನಲ್ಲಿ ಪಟ್ಟಣ್ಣ, ಮತ್ತೊಂದು ಸುತ್ತಿನಲ್ಲಿ ಸುರೇಶ್‌ ಕುಮಾರ್ ಅವರು ಮುನ್ನಡೆ ಪಡೆಯುತ್ತಿದ್ದರು. ಅಂತಿಮ ಎರಡು ಸುತ್ತಿನಲ್ಲಿ ಸುರೇಶ್ ಕುಮಾರ್‌ ಅವರಿಗೆ ವಿಜಯಮಾಲೆ ಒಲಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT