ಬೆಳಗಾವಿ: ‘ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಮೃಣಾಲ್ ಮತ್ತು ಪ್ರಿಯಾಂಕಾ ಇಬ್ಬರನ್ನೂ ಕಣಕ್ಕಿಳಿಸಿದ್ದೇವೆ. ಅವರು ಪಕ್ಷಕ್ಕೆ ಆಸ್ತಿ ಆಗುವರು ಮತ್ತು ಜನರ ಅಗತ್ಯಕ್ಕೆ ಸ್ಪಂದಿಸುವರು. ಅವರಿಬ್ಬರ ಗೆಲುವಿಗೆ ಕಾಂಗ್ರೆಸ್ ರಣತಂತ್ರ ರೂಪಿಸಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
‘ಅವರಿಬ್ಬರೂ ಚಿಕ್ಕವರು ಮತ್ತು ಹೆಚ್ಚಿನ ಅನುಭವ ಹೊಂದಿಲ್ಲ ಎಂಬ ಭಾವನೆ ಮೂಡಿಸಲು ಬಿಜೆಪಿಯವರು ಪ್ರಯತ್ನ ನಡೆಸಿದ್ದಾರೆ. ಇಬ್ಬರೂ ಕಲಿತಿದ್ದಾರೆ ಮತ್ತು ಏನು ಮಾಡಬೇಕೆಂದು ತಿಳಿದಿದ್ದಾರೆ. ಅವರು ತಮ್ಮದೇ ಆದ ಛಾಪು ಮೂಡಿಸುತ್ತಾರೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಲೋಕಸಭೆ ಚುನಾವಣೆ ಪ್ರಚಾರದ ವಿಷಯದಲ್ಲಿ ಲಕ್ಷ್ಮಣ ಸವದಿ ಅವರಿಗೆ ನಿರ್ಲಕ್ಷ್ಯ ತೋರಲಾಗಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಯಾರನ್ನೂ ಬದಿಗಿಟ್ಟಿಲ್ಲ. ಎಲ್ಲರೂ ಪ್ರಚಾರಕ್ಕೆ ಮುಂದಾಗಬೇಕು. ಬ್ಯಾನರ್ಗಳಲ್ಲಿ ಅವರ ಚಿತ್ರಗಳನ್ನು ಹಾಕುವ ಮತ್ತು ಬಿಡುವ ಬಗ್ಗೆ ಸ್ಥಳೀಯ ಘಟಕದವರು ನೋಡಿಕೊಳ್ಳುವರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.