ADVERTISEMENT

ಕಡಿಮೆ ಪರಿಹಾರಕ್ಕೆ ಭೈರನಾಯಕನಹಳ್ಳಿ ರೈತರ ವಿರೋಧ: ಅಭ್ಯರ್ಥಿಗಳಿಗೆ ನೋಟಾ ಪುರಸ್ಕಾರ

ರಾಷ್ಟ್ರೀಯ ಹೆದ್ದಾರಿಗೆ ಭೂಸ್ವಾಧೀನ

​ಪ್ರಜಾವಾಣಿ ವಾರ್ತೆ
Published 2 ಮೇ 2019, 10:51 IST
Last Updated 2 ಮೇ 2019, 10:51 IST
ನೋಟಾ ಚಲಾವಣೆ ಸಂಬಂಧ ಭೈರನಾಯಕನಹಳ್ಳಿಯ ಮನೆಗಳ ಗೋಡೆಗೆ ಅಂಟಿಸಿರುವ ಪೋಸ್ಟರ್‌ಗಳು
ನೋಟಾ ಚಲಾವಣೆ ಸಂಬಂಧ ಭೈರನಾಯಕನಹಳ್ಳಿಯ ಮನೆಗಳ ಗೋಡೆಗೆ ಅಂಟಿಸಿರುವ ಪೋಸ್ಟರ್‌ಗಳು   

ತುಮಕೂರು: ರಾಷ್ಟ್ರೀಯ ಹೆದ್ದಾರಿ 206ರ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಕಡಿಮೆ ಮೊತ್ತದ ಪರಿಹಾರ ನಿಗದಿಗೊಳಿಸಿರುವುದನ್ನು ವಿರೋಧಿಸಿ ಹಾಗೂ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ತಿಪಟೂರು ತಾಲ್ಲೂಕು ಭೈರನಾಯಕನಹಳ್ಳಿ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ ನೋಟಾ ಚಲಾಯಿಸಲು ತೀರ್ಮಾನಿಸಿದ್ದಾರೆ.

ಗ್ರಾಮದ ಬಹುತೇಕ ಮನೆಗಳ ಗೋಡೆಗಳಿಗೆ ‘ಅಭ್ಯರ್ಥಿಗಳಿಗೆ ನೋಟಾ ಪುರಸ್ಕಾರ’, ‘ನಮ್ಮ ಮತ ನೋಟಾ’ ಎಂದು ಬರೆದಿರುವ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.

ರಸ್ತೆ ಕಾಮಗಾರಿಗೆ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಬಿಡಿಗಾಸು ಪರಿಹಾರ ನೀಡಲಾಗಿದೆ ಎಂದು ಈ ಹಿಂದೆ ತಾಲ್ಲೂಕು ಕೇಂದ್ರದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು. ನಂತರ ಸಂಧಾನ ಸಭೆಗಳು ನಡೆದ ಕಾರಣ ಪ್ರತಿಭಟನೆ ಹಿಂಪಡೆದಿದ್ದರು. ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ದೊರೆಕಿಸಿಕೊಡುವುದಾಗಿ ಭರವಸೆ ಸಹ ನೀಡಿದ್ದರು.

ADVERTISEMENT

ಆದರೆ ತಮ್ಮ ಬೇಡಿಕೆ ಈಡೇರಿಕೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಸಕ್ತಿ ತೋರದ ಪರಿಣಾಮ ನೋಟಾ ಚಲಾವಣೆಗೆ ತೀರ್ಮಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.