ADVERTISEMENT

ಆನೇಕಲ್ ಶಾಸಕ ಶಿವಣ್ಣ ಮನೆ ಮೇಲಿನ ಐಟಿ ದಾಳಿ ಖಂಡಿಸಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 12:56 IST
Last Updated 16 ಏಪ್ರಿಲ್ 2018, 12:56 IST
ಆನೇಕಲ್ ಶಾಸಕ ಶಿವಣ್ಣ ಮನೆ ಮೇಲಿನ ಐಟಿ ದಾಳಿ ಖಂಡಿಸಿದ ಸಿದ್ದರಾಮಯ್ಯ
ಆನೇಕಲ್ ಶಾಸಕ ಶಿವಣ್ಣ ಮನೆ ಮೇಲಿನ ಐಟಿ ದಾಳಿ ಖಂಡಿಸಿದ ಸಿದ್ದರಾಮಯ್ಯ   

ಮೈಸೂರು: ಆನೇಕಲ್ ಶಾಸಕ ಶಿವಣ್ಣ ಅವರ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ರಾಜಕೀಯ ಪ್ರೇರಿತ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಡೆದ ದಾಳಿಯನ್ನು ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಮಾಬಾಯಿ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಪ್ಪು ಹಣ ಪತ್ತೆ ಹಚ್ಚುವ ಹಾಗೂ ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ನಡೆಸುವ ಐಟಿ ದಾಳಿಗೆ ಯಾವುದೇ ಅಭ್ಯಂತರ ಇಲ್ಲ. ಆದರೆ, ಗೆಲ್ಲುವ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಜಗ್ಗುವುದಿಲ್ಲ ಎಂದು ಹೇಳಿದರು.

ADVERTISEMENT

ಅಸಾದುದ್ದಿನ್ ಓವೈಸಿ ಜೆಡಿಎಸ್‌ಗೆ ಬೆಂಬಲ ಸೂಚಿಸಿರುವುದು ರಾಜ್ಯ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರದು. ಕರ್ನಾಟಕದಲ್ಲಿ ಅವರ ಪಕ್ಷಕ್ಕೆ ಸಾಮರ್ಥ್ಯ ಕಡಿಮೆ. ಶಕ್ತಿ ಕುಂದಿರುವ ಜೆಡಿಎಸ್ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.