ADVERTISEMENT

ಕೋರ್ಟ್‌ ಅಫಿಡವಿಟ್‌ ಮಾಡಿಸಿ ಮತ ಯಾಚನೆ!

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ರವೀಂದ್ರನಾಥ ದೊಡ್ಡಮೇಟಿ
ರವೀಂದ್ರನಾಥ ದೊಡ್ಡಮೇಟಿ   

ನರೇಗಲ್ (ಗದಗ ಜಿಲ್ಲೆ): ‘ರಾಜಕೀಯದಲ್ಲಿ ಇರುವ ಕೊನೇ ಕ್ಷಣದವರೆಗೂ ಜನಪರ ಆಡಳಿತ ನೀಡುತ್ತೇನೆ; ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ' ಎಂದು ಕೋರ್ಟ್‌ ಅಫಿಡವಿಟ್‌ ಮಾಡಿಸಿ, ಆ ಪ್ರಮಾಣಪತ್ರವನ್ನು ಜನರ ಮುಂದಿಟ್ಟು ಮತ ಯಾಚಿಸುವುದಾಗಿ ರೋಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.

‘ಮಾತಿಗೆ ತಪ್ಪಿದರೆ ಜನ ನನ್ನ ವಿರುದ್ಧ ಪ್ರಕರಣ ದಾಖಲಿಸಬಹುದು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರವೀಂದ್ರನಾಥ ಅವರು ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ ಕುಟುಂಬದ ಮೂರನೆಯ ತಲೆಮಾರು.

ADVERTISEMENT

ಕೆರೆಗಳ ಅಭಿವೃದ್ಧಿ, ರಸ್ತೆ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಪರಿಸರ ಸಂರಕ್ಷಣೆ ಸೇರಿ ಅಭಿವೃದ್ಧಿಯ ಕುರಿತು ದೂರದೃಷ್ಟಿಯ ವಿಚಾರಗಳನ್ನು ಕ್ಷೇತ್ರದ ಪ್ರತಿ ಮತದಾರನ ಮನೆಯ ಬಾಗಿಲಿಗೆ ತಲುಪಿಸಿ ಮತ ಯಾಚನೆ ಮಾಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.