ADVERTISEMENT

ಲಿಂಗಾಯತ, ಒಕ್ಕಲಿಗ, ಕುರುಬರಿಗೆ ಅಗ್ರ ಮಣೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ಲಿಂಗಾಯತ, ಒಕ್ಕಲಿಗ, ಕುರುಬರಿಗೆ ಅಗ್ರ ಮಣೆ
ಲಿಂಗಾಯತ, ಒಕ್ಕಲಿಗ, ಕುರುಬರಿಗೆ ಅಗ್ರ ಮಣೆ   

ಬೆಂಗಳೂರು: ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್‌ ಪ್ರಕಟಿಸಿರುವ 218 ಅಭ್ಯರ್ಥಿಗಳ ಪಟ್ಟಿಯಲ್ಲಿ ಲಿಂಗಾಯತ, ಒಕ್ಕಲಿಗ ಹಾಗೂ ಕುರುಬ ಸಮುದಾಯದವರಿಗೆ ಮಣೆ ಹಾಕಲಾಗಿದೆ.

ಲಿಂಗಾಯತ ಸಮುದಾಯಕ್ಕೆ ಸೇರಿರುವ (ವೀರಶೈವ, ಪಂಚಮಸಾಲಿ, ರಡ್ಡಿ ಲಿಂಗಾಯತ) 49 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದ ಪಾಲು ಶೇ 17ರಷ್ಟು ಇದೆ. 2013ರಲ್ಲಿ ಈ ಸಮುದಾಯದ 44 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿತ್ತು. ಅದರಲ್ಲಿ ರಡ್ಡಿ ಲಿಂಗಾಯತ ಸಮುದಾಯದ ಐವರು ಅಭ್ಯರ್ಥಿಗಳಿದ್ದರು.

‘ಲಿಂಗಾಯತ ಹಾಗೂ ವೀರಶೈವ ಲಿಂಗಾಯತರಿಗೆ (ಬಸವ ತತ್ವವನ್ನು ನಂಬುವ) ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಶಿಫಾರಸು ಮಾಡಿದೆ. ಒಕ್ಕಲಿಗ ಸಮುದಾಯದ (ರೆಡ್ಡಿ, ಬಂಟ, ಗೌಡ ಜನಾಂಗ) 46 ಮಂದಿ, ಕುರುಬ ಸಮುದಾಯದ 17 ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕಿದೆ. ಕಳೆದ ಚುನಾವಣೆಯಲ್ಲಿ ಪಕ್ಷ 19 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಈ ಸಲ ಈ ಪ್ರಾತಿನಿಧ್ಯ 15ಕ್ಕೆ ಇಳಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.