ಭ್ರಷ್ಟಾಚಾರ ತೊಲಗಿಸಲಿ
‘ಭಯೋತ್ಪಾದನೆಗಿಂತ ಭ್ರಷ್ಟಾಚಾರವೇ ಭಯಾನಕವಾದದ್ದು’ ಎಂಬ ವಾಸ್ತವ ಅರಿತು ಹೊಸ ಸರ್ಕಾರದ ಮುಖ್ಯಮಂತ್ರಿ ಕೆಲಸ ಮಾಡಲಿ. ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ... ಯಾರಾದರೂ ಮುಖ್ಯಮಂತ್ರಿಯಾಗಲಿ. ಆದರೆ ಅಗ್ಗದ, ಓಲೈಸುವ, ಅರ್ಥಹೀನ ಭಾಗ್ಯಗಳನ್ನು ಬದಿಗಿಟ್ಟು ಪ್ರಾಮಾಣಿಕವಾಗಿ ರೈತರ ಹಿತ, ಬಡವರ ಕಾಳಜಿ ತೋರಲಿ. ಜಾತಿ ಮತ ಭೇದವಿಲ್ಲದೆ ಎಲ್ಲಾ ಹಂತಗಳಲ್ಲೂ ಉಚಿತ ಶಿಕ್ಷಣ ಸಿಗುವಂತಾಗಲಿ.
–ಬೀರಣ್ಣ ನಾಯಕ ಮೊಗಟಾ ಯಲ್ಲಾಪುರ
***
ಚುನಾವಣೆ ಬಂತೆಂದರೆ...
ಮನೆ ಹುಡುಕಿ ಬರ್ತಾರೆ
ಅಕ್ಕ ಅಣ್ಣ ಅಂತಾರೆ
ಕೈ ಕಾಲು ಹಿಡೀತಾರೆ
ಸೋತ್ರೆ ನಮ್ಮನ್ನೇ ಬೈತಾರೆ!
–ಪಿ.ಜಯವಂತ ಪೈ, ಕುಂದಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.