ಜಾತಿ ಸಮೀಕರಣವನ್ನೇ ಉಸಿರಾಗಿಸಿಕೊಂಡು ಕುಟುಂಬ ರಾಜಕಾರಣದ ಸುಪ್ಪತ್ತಿಗೆಯಲ್ಲಿ ನಿದ್ರಿಸುತ್ತಿರುವ ರಾಜಕೀಯ ಪಕ್ಷಗಳು ಇನ್ನೂ ಬದಲಾದಂತೆ ಕಾಣುತ್ತಿಲ್ಲ. ‘ತಾ ಕಳ್ಳ, ಪರರ ನಂಬ’ ಎಂಬ ಸ್ಥಿತಿಯಂತೆ ಈಗಿನ ರಾಜಕಾರಣ ಕಾಣತೊಡಗಿದೆ. ಭ್ರಷ್ಟತೆಯ ಮುಖವಾಡವನ್ನು ಒಬ್ಬರು ಇನ್ನೊಬ್ಬರಿಗೆ ಹಾಕಲು ಹೊರಟಿರುವುದು ಹೇಸಿಗೆ ಹುಟ್ಟಿಸುತ್ತಿದೆ.
ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಶಿಕ್ಷಣದ ವ್ಯಾಪಾರೀಕರಣ, ಬಡ, ಮಧ್ಯಮ ವರ್ಗದವರ ಆರ್ಥಿಕ ಸಂಕಷ್ಟಗಳ ನಿವಾರಣೆಗೆ ಶಾಶ್ವತ ಕಾರ್ಯಕ್ರಮ ರೂಪಿಸುವ ಬಗೆಗೆ ಚರ್ಚೆ ನಡೆಸುತ್ತಿಲ್ಲ. ಹಲವಾರು ದಶಕಗಳಲ್ಲಿ ದೇಶ ಸಾಧಿಸಿರುವ ಪ್ರಗತಿಯು ಕೋಟ್ಯಂತರ ಜನರ ಕಠಿಣ ಪರಿಶ್ರಮದ ಪ್ರತೀಕವಾಗಿದ್ದರೂ ಅದನ್ನು ತಮ್ಮ ಸ್ವಂತ ಸಾಧನೆಯೆಂದೇ ಬಿಂಬಿಸಿಕೊಂಡು, ವೈಫಲ್ಯಕ್ಕೆ ತಾವು ಕಾರಣವಲ್ಲವೆಂದು ನುಣುಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿರುವುದನ್ನು ಪ್ರಜ್ಞಾವಂತ ಮತದಾರರು ಎಚ್ಚರಿಕೆಯಿಂದ ಗಮನಿಸಬೇಕು.
- ಸಿ.ಎಚ್.ಮಧುಕುಮಾರ ಚಾಮನಹಳ್ಳಿ, ಮದ್ದೂರು ತಾಲ್ಲೂಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.