ADVERTISEMENT

ಅಂದ ಚೆಂದದ ಕುರಿತು ಗಮನ ಹರಿಸಿಲ್ಲ: ನವಾಜುದ್ದಿನ್ ಸಿದ್ದಿಕಿ

ಪಿಟಿಐ
Published 18 ಜುಲೈ 2017, 11:09 IST
Last Updated 18 ಜುಲೈ 2017, 11:09 IST
ಅಂದ ಚೆಂದದ ಕುರಿತು ಗಮನ ಹರಿಸಿಲ್ಲ: ನವಾಜುದ್ದಿನ್ ಸಿದ್ದಿಕಿ
ಅಂದ ಚೆಂದದ ಕುರಿತು ಗಮನ ಹರಿಸಿಲ್ಲ: ನವಾಜುದ್ದಿನ್ ಸಿದ್ದಿಕಿ   

ಮುಂಬೈ: ಬಾಲಿವುಡ್ ಪ್ರತಿಭಾವಂತ ನಟ ನವಾಜುದ್ದಿನ್ ಸಿದ್ದಿಕಿ ಅನುಭವಕ್ಕೆ ಬಂದ ವರ್ಣಬೇಧದ  ಕುರಿತು  ಟ್ವಿಟರ್‌ ಮೂಲಕ ಬೇಸರ ಹೊರಹಾಕಿದ್ದಾರೆ.

‘ಸ್ಫುರದ್ರೂಪಿ ಕಲಾವಿದರೊಂದಿಗೆ ನಟಿಸಲು ನಾನು ಅರ್ಹನಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ನೋಡಲು ಸುಂದರನಲ್ಲ, ಗಾಢ ಬಣ್ಣ ಹೊಂದಿರುವವನು. ಆದರೆ, ನಾನೆಂದಿಗೂ ಅದರ ಕಡೆಗೆ ಗಮನಕೊಟ್ಟವನಲ್ಲ’ ಎಂದು ನವಾಜುದ್ದಿನ್ ಸಿದ್ದಿಕಿ ಟ್ವೀಟ್‌ ಮಾಡಿದ್ದಾರೆ.

ಬಾಲಿವುಡ್‌ನಲ್ಲಿ ಚೆಂದಕ್ಕಿಂತ ಪ್ರತಿಭೆಗೆ ಹೆಚ್ಚು ಬೆಲೆಯಿದೆ ಎಂದು ತಮ್ಮ ಹಿಂದಿನ ಸಂದರ್ಶನದಲ್ಲಿ ಸಿದ್ದಿಕಿ ಹೇಳಿಕೊಂಡಿದ್ದರು.

ADVERTISEMENT

ಪ್ರಸ್ತುತ ವರ್ಣಬೇಧದ ಕುರಿತು ಮಾಡಿರುವ ಟ್ವೀಟ್‌ನ ಹಿನ್ನೆಲೆ ಏನು, ಯಾವ ಘಟನೆ ಕಾರಣ ಎನ್ನುವುದರ ಕುರಿತು ನವಾಜುದ್ದಿನ್ ಸಿದ್ದಿಕಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.