ADVERTISEMENT

ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:30 IST
Last Updated 1 ಮಾರ್ಚ್ 2012, 19:30 IST

`ಮುಂಜಾನೆ~
ಎಸ್. ಭಾಗ್ಯವತಿ ಮತ್ತು ಎಸ್. ನಾರಾಯಣ್ ನಿರ್ಮಿಸಿರುವ `ಮುಂಜಾನೆ~ ಚಿತ್ರಕ್ಕೆ ಎಸ್. ನಾರಾಯಣ್ ನಿರ್ದೇಶನ, ಸಂಗೀತ, ಸಾಹಿತ್ಯ, ಕತೆ, ಚಿತ್ರಕತೆ ಹಾಗೂ ಸಂಭಾಷಣೆಯನ್ನು ಒದಗಿಸಿದ್ದಾರೆ.

`ಚೆಲುವಿನ ಚಿತ್ತಾರ~, `ಶೈಲೂ~ ನಂತರ ಮತ್ತೆ ~ಮುಂಜಾನೆ~ ಚಿತ್ರದಲ್ಲಿ ಎಸ್. ನಾರಾಯಣ್ ಹಾಗೂ ಗಣೇಶ್ ಒಂದಾಗಿದ್ದಾರೆ. ಈ ಚಿತ್ರದಲ್ಲಿ ಪ್ರೇಮ, ಪ್ರೀತಿ ಅಲ್ಲದೇ ಒಂದು ಕುಟುಂಬದಲ್ಲಿ ಹೇಗೆ ಒಬ್ಬರಿಗೊಬ್ಬರು ತ್ಯಾಗವನ್ನು ಮಾಡುತ್ತಾ ಹೋಗುತ್ತಾರೆ ಎಂಬುದನ್ನು ಚಿತ್ರಿಸಲಾಗಿದೆ ಎಂದು ತಂಡ ಹೇಳಿಕೊಂಡಿದೆ.

ಚಿತ್ರದ ನಾಯಕಿ ಮಂಜರಿ ಫಡ್ನಿಸ್. ಈಗಾಗಲೇ ಹಿಂದಿ, ತೆಲುಗು ಹಾಗೂ ಕನ್ನಡದ `ದಿಲ್ ಖುಷ್~ ಚಿತ್ರದಲ್ಲಿ ನಟಿಸಿದ್ದಾರೆ. ಮಾಳವಿಕ ಅವಿನಾಶ್ ಹಾಗೂ ಜಿ. ರಾಜಗೋಪಾಲ್ ಜೋಷಿ ಮುಖ್ಯ ಪಾತ್ರಗಳಲ್ಲಿದ್ದಾರೆ.

`ಸಂಕ್ರಾಂತಿ~
ಆರ್.ಎಸ್. ಗೌಡ ನಿರ್ಮಾಣದ ಮುಸ್ಸಂಜೆ ಮಹೇಶ್ ನಿರ್ದೇಶನದ `ಸಂಕ್ರಾಂತಿ~ಯ ನಾಯಕ ನಟ ಜಗ್ಗೇಶ್ ಪುತ್ರ ಗುರುರಾಜ್. ನಾಯಕಿ ರೂಪಶ್ರಿ. ಡಾ. ಕೆ.ಎಸ್. ಅಶ್ವತ್ಥ್ ಅವರ ಮೊಮ್ಮಗ ಸ್ಕಂದ ಈ ಚಿತ್ರದಿಂದ ಪರಿಚಯವಾಗುತ್ತಿದ್ದಾರೆ. ಬಿ.ಎ. ಮಧು ಸಂಭಾಷಣೆ ಇರುವ ಈ ಚಿತ್ರದಲ್ಲಿ ತಾಯಿ ಮಗನ ಬಾಂಧವ್ಯದ ಕುರಿತು ಪ್ರಸ್ತಾಪವಿದೆ.

ಉಳಿದಂತೆ ಮಾಸ್ಟರ್ ಹಿರಣ್ಣಯ್ಯ, ತುಳಸಿ ಶಿವಮಣಿ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ವಿ. ಶ್ರಿಧರ್ ಸಂಭ್ರಮ್ ಸಂಗೀತ, ಸಿನಿಟೆಕ್ ಸೂರಿ ಛಾಯಾಗ್ರಹಣ, ಜಾನಿ ಹರ್ಷ ಸಂಕಲನ, ಕೌರವ ವೆಂಕಟೇಶ್ ಸಾಹಸ ಚಿತ್ರಕ್ಕಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT