ADVERTISEMENT

ಉಡುಪಿಯಲ್ಲಿ ಮಹಾನದಿ

​ಪ್ರಜಾವಾಣಿ ವಾರ್ತೆ
Published 31 ಮೇ 2012, 19:30 IST
Last Updated 31 ಮೇ 2012, 19:30 IST

ಜೆರ‌್ರಿ ವಿನ್ಸೆಂಟ್ ಡಾಯಸ್-ಗ್ಲೆನ್ ಡಾಯಸ್ ನಿರ್ಮಾಣದ `ಮಹಾನದಿ~ ಚಿತ್ರಕ್ಕೆ ಉಡುಪಿಯ ಬೆಂಗೇರೆಯಲ್ಲಿ ಸಂಜನಾ, ದಿಲೀಪ್ ರಾಜ್ ಅಭಿನಯಿಸಿದ ದೃಶ್ಯಗಳ ಚಿತ್ರೀಕರಣ ನಡೆಯಿತು.
 
ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ- ನಿರ್ದೇಶನ ಕೃಷ್ಣಪ್ಪ ಉಪ್ಪೂರು ಅವರದು. ಛಾಯಾಗ್ರಹಣ ಚಂದ್ರುಬೆಳವಂಗಲ, ಸಂಗೀತ- ಎ.ಎಂ.ನೀಲ್, ಸಂಕಲನ- ಶ್ರೀನಿವಾಸ್ ಪಿ ಬಾಬು, ಕಲೆ - ಪುರುಷೋತ್ತಮ್ ಅಡ್ವೆ, ನೃತ್ಯ- ವಿ.ನಾಗೇಶ್ ಕಲೈ,  ಸಾಹಸ- ಮಾಸ್ ಮಾದ ಅವರ ಕೊಡುಗೆ.

ತಾರಾಗಣದಲ್ಲಿ ಸಂಜನಾ, ದಿಲೀಪ್ ರಾಜ್, ರಂಗಾಯಣ ರಘು, ಲೋಕನಾಥ್, ಶೋಭರಾಜ್, ವೆಂಕಟಾದ್ರಿ, ಪದ್ಮಿನಿ ಪ್ರಕಾಶ್, ಮಾಲತಿ ಸರದೇಶಪಾಂಡೆ, ವರ್ಷಿಣಿ, ಮುನಿ, ರಾಕೇಶ್, ಧರ್ಮೇಂದ್ರ, ಗುರುರಾಜ ಹೊಸಕೋಟೆ, ವಿನ್ಸೆಂಟ್ ಕಲ್ಯಾಣಪುರ, ಉಡುಪಿ ರವಿರಾಜ್, ಎಂ.ಎಸ್. ಭಟ್, ದಾಮೋದರ ಸುವರ್ಣ, ರಘುರಾಜ್, ಡಾ.ಸುಕನ್ಯ ಮಾರ್ಟಿನ್, ಪ್ರದೀಪ್ ಚಂದ್ರ, ವಿ.ಜಿ. ಪಾಲ್, ಶ್ರಿಪಾದ, ರವಿ, ಕೊರಂಗ್ರ ಪಾಡಿ, ಡಾ.ವಿಜೆಯೇಂದ್ರ ಮುಂತಾದವರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.