ADVERTISEMENT

ಉದ್ಯಾನನಗರಿಯಲ್ಲಿ ‘ಜಗ್ಗಿ’ ಹಾಡು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಎಸ್.ಎನ್.ಎಸ್. ಶ್ರೀನಿವಾಸ ನಿರ್ಮಾಣದ ‘ಜಗ್ಗಿ’ ಚಿತ್ರದ ‘ಯಾರಾದರೂ ಏನಾದರೂ ಎಂದೆಂದಿಗೂ ನೀನಾಗಿರು’ ಎಂಬ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ಮಾನ್ಯತಾ ಟೆಕ್‌ಪಾರ್ಕ್, ನೈಸ್‌ರೋಡ್ ಮತ್ತಿತರ ಕಡೆಗಳಲ್ಲಿ ನಡೆಯಿತು.

ನಾಯಕ ಸುನೀಲ್‌ರಾಜ್ ಅಭಿನಯಿಸಿದ ಈ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಗೌಸ್‌ಪೀರ್ ಸಾಹಿತ್ಯ ಬರೆದಿದ್ದಾರೆ. ಸುಲ್ತಾನ್‌ರಾಜ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ    ರಮೇಶ್‌ಕೊಯಿರಾ ಛಾಯಾಗ್ರಹಣ, ಎಲ್ವಿನ್ ಜೋಶ್ವ ಸಂಗೀತ, ಈಶ್ವರ್ ಸಂಕಲನ, ಹರಿಕೃಷ್ಣ ನೃತ್ಯವಿದೆ.

ಅಹನಾ, ರಮೇಶ್‌ಭಟ್, ಶರತ್‌ ಲೋಹಿತಾಶ್ವ, ಮುನಿ, ಬುಲೆಟ್‌ ಪ್ರಕಾಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.