ADVERTISEMENT

ಚಿತ್ರದುರ್ಗದಲ್ಲಿ ಕೇಳದೆ ನಿಮಗೀಗ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

ಸತೀಶ್ ಪ್ರಧಾನ್.ಬಿ. ನಿರ್ದೇಶನದ `ಕೇಳದೆ ನಿಮಗೀಗ~ ಚಿತ್ರದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತಿದೆ.

ಮಾತಿನ ಭಾಗದ ಚಿತ್ರಿಕರಣ ಹಾಗೂ ಕೋಟೆಯ ಒಳಭಾಗದಲ್ಲಿ `ಮಾರಮ್ಮ ಊರಮ್ಮ ಕಣ್ ಬಿಟ್ಟು ನೋಡ್ತಾರೆ ಲವ್ ಸ್ಟೋರಿಯ..~ ಎಂಬ ಯುಗಳ ಗೀತೆಗೆ, ಯಶಸ್ ಮತ್ತು ಸುಪ್ರೀತಾ ಹೆಜ್ಜೆ ಹಾಕಿದರು.

 ಯುವರಾಜ ಸಮರ್ಥ್ ನಿರ್ಮಾಣದ ಈ ಚಿತ್ರಕ್ಕೆ ನೃತ್ಯ ನಿರ್ದೇಶಕ ಮಾಲೂರು ಶ್ರಿನಿವಾಸ್, ಛಾಯಾಗ್ರಹಣ ವೆಂಕಟ್, ಸಂಗೀತ ವಿ.ಮನೋಹರ್, ಸಂಕಲನ ಕೆ.ಎಂ.ಪ್ರಕಾಶ್, ಕಲೆ ಥರ್ಮಕೋಲ್ ಶ್ರಿನಿವಾಸ್, ಸಾಹಸ ಅಲ್ಟಿಮೇಟ್ ಶಿವು, ಡಿಪರೆಂಟ್ ಡ್ಯಾನಿ, ಸಾಹಿತ್ಯ ವಿ.ನಾಗೇಂದ್ರ ಪ್ರಸಾದ್, ವಿ.ಮನೋಹರ್, ಸತೀಶ್ ಪ್ರಧಾನ್ ಅವರದು. ತಾರಾಗಣದಲ್ಲಿ ಯಶಸ್, ಪೂಜಾಗಾಂಧಿ, ಸುಪ್ರೀತಾ, ರೂಪಾದೇವಿ, ನೀನಾಸಂ ಅಶ್ವತ್ಥ್, ಧರ್ಮ, ಬುಲೆಟ್ ಪ್ರಕಾಶ್ ಅಭಿನಯಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.