ADVERTISEMENT

ತೆರೆಗೆ ಬಂದ ‘ಬಕಾಸುರ’

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST
ಕಾವ್ಯಾ ಗೌಡ
ಕಾವ್ಯಾ ಗೌಡ   

ರವಿಚಂದ್ರನ್‌ ಮತ್ತು ಆರ್.ಜೆ. ರೋಹಿತ್‌ ನಟನೆಯ ‘ಬಕಾಸುರ’ ಚಿತ್ರ ಇಂದು (ಏಪ್ರಿಲ್‌ 27) ತೆರೆ ಕಾಣುತ್ತಿದೆ. ಈ ಚಿತ್ರದ ಟ್ರೇಲರ್‌ಗೆ ನಟ ಯಶ್‌ ಧ್ವನಿ ನೀಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು.

ಚಿತ್ರ ಬಿಡುಗಡೆ ಹಂತಕ್ಕೆ ಬಂದಿರುವ ಕಾರಣ ನಿರ್ಮಾಪಕರೂ ಆಗಿರುವ ರೋಹಿತ್ ಪ್ರಚಾರಕ್ಕಾಗಿ ಯಶ್ ಅವರನ್ನು ಭೇಟಿ ಮಾಡಿದ್ದರಂತೆ. ಅದಕ್ಕೆ ಯಶ್‌ ಅವರಿಂದ ಸಮ್ಮತಿಯೂ ಸಿಕ್ಕಿತಂತೆ. ಆದರೆ, ಅವರು ಒಂದು ಷರತ್ತು ವಿಧಿಸಿದ್ದರಂತೆ. ವಿಭಿನ್ನ ರೀತಿಯಲ್ಲಿ ಜನರಿಗೆ ಚಿತ್ರ ತಲುಪಿಸಲು ಸಂದರ್ಶನ ಮಾದರಿಯಲ್ಲಿ ನಟ, ನಿರ್ಮಾಪಕರಿಗೆ ಯಶ್‌ ಹಲವು ಪ್ರಶ್ನೆ ಕೇಳಿದರಂತೆ. ಅದಕ್ಕೆ ನಾಜೂಕಾದ ಉತ್ತರವೂ ಸಿಕ್ಕಿತಂತೆ. ಆದರೆ, ನಿರೂಪಣೆ ಮಾಡುವುದು ಕಷ್ಟದ ಕೆಲಸ ಎನ್ನುವುದು ಯಶ್ ಅಂಬೋಣ.

‘ಜನರಿಗೆ ವಿಷಯ ತಿಳಿಸುವಂತೆ ಮನರಂಜನೆ ಕೂಡ ನೀಡಬೇಕಿದೆ. ಬಕಾಸುರನ ಯಶಸ್ಸಿಗೆ ಶುಭ ಕೋರಿದ್ದೇನೆ. ಆದರೆ, ನಟ, ನಿರ್ಮಾಪಕರ ಸಂದರ್ಶನಕ್ಕೆ ನಾನು ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ಸಂವಾದದಲ್ಲಿ ನಕ್ಕರು ಯಶ್‌.

ADVERTISEMENT

ರವಿಚಂದ್ರನ್ ಮೊದಲ ಬಾರಿಗೆ ಈ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ಸಮಾಜದಲ್ಲಿ ದುಡ್ಡು ಇರೋರಿಗೆ ಸಿಗುವ ಗೌರವವೇ ಬೇರೆ. ನಾಯಕನದು ವಕೀಲನ ಪಾತ್ರ. ಒಬ್ಬ ವ್ಯಕ್ತಿ ಹಣದ ಹಿಂದೆ ಬಿದ್ದರೆ ಏನೆಲ್ಲಾ ಅನಾಹುತ ಸಂಭವಿಸುತ್ತದೆ ಎನ್ನುವುದೇ ಕಥಾಹಂದರ.

ಕಾವ್ಯಾ ಗೌಡ ಈ ಚಿತ್ರದ ನಾಯಕಿ. ನವನೀತ್ ಈ ಸಿನಿಮಾ ನಿರ್ದೇಶಿಸಿದ್ದಾರೆ. 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.