ADVERTISEMENT

ಮಕ್ಕಳ ಚಿತ್ರದತ್ತ ಮುದ್ದುರಾಜ್

​ಪ್ರಜಾವಾಣಿ ವಾರ್ತೆ
Published 3 ಮೇ 2012, 19:30 IST
Last Updated 3 ಮೇ 2012, 19:30 IST

ನಿರ್ದೇಶಕ ಜಿ.ಕೆ. ಮುದ್ದುರಾಜ್ ಇದೇ ಮೊದಲ ಬಾರಿಗೆ ಮಕ್ಕಳ ಚಿತ್ರ ನಿರ್ದೇಶಿಸುವ ಮನಸ್ಸು ಮಾಡಿದ್ದಾರೆ. ಎಂ.ಎಸ್. ಎಂಟರ್‌ಪ್ರೈಸಸ್ ಸಂಸ್ಥೆ ನಿರ್ಮಿಸುತ್ತಿರುವ `ನಾವು ಗೆಳೆಯರು~ ಚಿತ್ರವನ್ನು ಆರಂಭಿಸಿರುವ ಮುದ್ದುರಾಜ್ ಚಿತ್ರಕ್ಕಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಬಿ. ಮಲ್ಲೇಶ್ ಸಂಭಾಷಣೆ, ಧನುಷ್ ಛಾಯಾಗ್ರಹಣ, ಬಾಬುಖಾನ್ ಕಲಾ ನಿರ್ದೇಶನ, ನಾಗಪ್ಪ ಮಾರಡಗಿ ಸಹನಿರ್ದೇಶನ ಚಿತ್ರಕ್ಕಿದೆ. ಚಿತ್ರದಲ್ಲಿ ರಾಜ್ಯಪ್ರಶಸ್ತಿ ವಿಜೇತ ಮಾ.ಅನಿಲ್, ಮಾ.ಕಿರಣ್, ಮಾ.ತೇಜಸ್, ಮಾ.ಪುತ್ತರ, ಮಾ.ರೋಹಿತ್, ಮಾ. ಸೃಜನ್, ಬೇಬಿ ಚಂದನ, ಬೇಬಿ ಸ್ವಾತಿ, ಬೇಬಿ ಮೇಘನಾ ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.