ಎಸ್. ಮಹೇಂದರ್ ನಿರ್ದೇಶನದ ‘ಪಾಪು’ ಚಿತ್ರ ಭಾವನಾತ್ಮಕ ಸನ್ನಿವೇಶವನ್ನು ಇತ್ತೀಚೆಗೆ ಶ್ರೀನಗರ ಕಿಟ್ಟಿ, ರಂಗಾಯಣ ರಘು, ವೀಣಾ ಸುಂದರ್, ಪವನ್ ಅವರ ಅಭಿನಯದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ನಂತರ ಶ್ರಿನಗರ ಕಿಟ್ಟಿ ಮತ್ತು ರವಿಚೇತನ್ ಹೊಡೆದಾಟದ ದೃಶ್ಯಗಳು ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನದಲ್ಲಿ ನಡೆದವು.
ಗಂಗಹನುಮಯ್ಯ ಬಿ.ಪಿ ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ -ಜೆ.ಎಸ್. ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಇದೆ. ತಾರಾಗಣದಲ್ಲಿ ಕೃತಿ ಕರಬಂಧ, ಸುಹಾಸಿನಿ, ಶರತ್ಬಾಬು, ಸಾದು ಕೋಕಿಲ, ತಬಲಾನಾಣಿ, ಚಿಕ್ಕಣ್ಣ, ರವಿಚೇತನ್ ಮುಂತಾದವರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.