ADVERTISEMENT

ಲಾಕ್ ಡೌನ್ ನಂತರ ಆದಿತ್ಯ ‘ಮುಂದುವರೆದ ಅಧ್ಯಾಯ’

​ಪ್ರಜಾವಾಣಿ ವಾರ್ತೆ
Published 28 ಮೇ 2020, 19:30 IST
Last Updated 28 ಮೇ 2020, 19:30 IST
ಆದಿತ್ಯ
ಆದಿತ್ಯ   

ಆದಿತ್ಯ ನಾಯಕರಾಗಿ ನಟಿಸಿರುವ ‘ಮುಂದುವರೆದ ಅಧ್ಯಾಯ’ ಚಿತ್ರ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಲಾಕ್ ಡೌನ್ ತೆರವಾಗಿ ಚಿತ್ರಮಂದಿರ ಬಾಗಿಲು ತೆರೆಯುವುದನ್ನು ಚಿತ್ರತಂಡ ಎದುರು ನೋಡುತ್ತಿದೆ.

ಕಣಜ ಎಂಟರ್ ಪ್ರೈಸಸ್ ಲಾಂಛನ ದಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಬಾಲು ಚಂದ್ರಶೇಖರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರತಂಡಲಾಕ್ ಡೌನ್ ಪೂರ್ವದಲ್ಲೇ ಕರ್ನಾಟಕ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕೃತ ಮಂಡಳಿಗೆ ಚಿತ್ರಕ್ಕೆ ಪ್ರಮಾಣ ಪತ್ರ ಸಲ್ಲಿಸಲು ಅರ್ಜಿ ಸಲ್ಲಿದೆ. ಸೆನ್ಸಾರ್ ಮಂಡಳಿ ಪುನಾ ಕಾರ್ಯ ಆರಂಭಿಸದ ಕೂಡಲೆ ನಮ್ಮ ಚಿತ್ರವನ್ನು ವೀಕ್ಷಿಸುವ ಭರವಸೆಯಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ನಿರ್ದೇಶಕಬಾಲು ಚಂದ್ರಶೇಖರ್.

'ಬೆಂಗಳೂರು ಅಂಡರ್ ವರ್ಲ್ಡ್' ಸಿನಿಮಾದ ನಂತರ ಯಾವುದೇ ಚಿತ್ರದಲ್ಲಿ ಆದಿತ್ಯ ನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ದರ್ಶನ್ ಅಭಿನಯದ ‘ಚಕ್ರವರ್ತಿ' ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರಷ್ಟೇ. ‘ಡೆಡ್ಲಿ ಸೋಮ’ನಾಗಿ ಪ್ರೇಕ್ಷಕರ ಮನದಲ್ಲಿ ಉಳಿದಿರುವ ಆದಿತ್ಯ ವಿಭಿನ್ನ ಕಥೆಯ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಈಗಾಗಲೇ ಸಿದ್ದವಾಗಿರುವ ಚಿತ್ರವನ್ನು ಇತ್ತೀಚೆಗೆ ಮಂಜರಿ ಸ್ಟುಡಿಯೋದಲ್ಲಿ ನಾಯಕ ಆದಿತ್ಯ, ಹಿನ್ನೆಲೆ ಸಂಗೀತ ನೀಡಿರುವ ಅನೂಪ್ ಸೀಳಿನ್, ಸಂಗೀತ ನೀಡಿರುವ ಜಾನಿ - ನಿತಿನ್, ಛಾಯಾಗ್ರಾಹಕ ದಿಲೀಪ್ ಚಕ್ರವರ್ತಿ, ಸಂಕಲನಕಾರ ಶ್ರೀಕಾಂತ್ ಮತ್ತು ಎಫೆಕ್ಟ್ ರಜನ್ ಅವರು ನಿರ್ದೇಶಕರ ಜತೆಗೆ ಕುಳಿತು ವೀಕ್ಷಿಸಿದ್ದಾರೆ.

ADVERTISEMENT

ಚಿತ್ರ ನೋಡಿದ ನಂತರ ಚಿತ್ರತಂಡ ತುಂಬಾ ಖುಷಿಯಲ್ಲಿದೆಯಂತೆ. ಲಾಕ್ ಡೌನ್ ಮುಗಿದು ಯಾವಾಗ ನಮ್ಮ ಚಿತ್ರ ತೆರೆಗೆ ಬರುತ್ತದೆಯೋ, ಪ್ರೇಕ್ಷಕರು ಯಾವ ರೀತಿ ಈ ಚಿತ್ರವನ್ನು ಬರಮಾಡಿಕೊಳ್ಳಲಿದ್ದಾರೆ ಎನ್ನುವ ಕಾತರದಲ್ಲಿದೆಯಂತೆ ಚಿತ್ರತಂಡ.ಚಿತ್ರದ ಟೀಸರ್ ಹಾಗೂ ಟ್ರೇಲರ್ ವೀಕ್ಷಕರ ಗಮನ ಸೆಳೆದು, ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸಿತ್ತು.

ಆಶಿಕಾ ಸೋಮಶೇಖರ್, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಅಜಯ್ ರಾಜ್, ವಿನಯ್ ಕೃಷ್ಣಸ್ವಾಮಿ, ಸಂದೀಪ್ ಕುಮಾರ್, ಚಂದನ ಗೌಡ ಮುಂತಾದವರು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.