ADVERTISEMENT

ಸಿನಿ ಸುದ್ದಿ | ನ.27ಕ್ಕೆ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ತೆರೆಗೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 22:21 IST
Last Updated 24 ನವೆಂಬರ್ 2025, 22:21 IST
ಬೃಂದಾ ಆಚಾರ್ಯ 
ಬೃಂದಾ ಆಚಾರ್ಯ    

ಕಳೆದ ನ.21ರಂದು ತೆರೆಕಾಣಬೇಕಿದ್ದ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಸಿನಿಮಾ ಒಂದು ವಾರ ಮುಂದೂಡಿಕೆಯಾಗಿದ್ದು, ಇದೇ ಗುರುವಾರ(ನ.27) ಚಿತ್ರ ರಿಲೀಸ್‌ ಆಗಲಿದೆ. 

ಕೆಲ ತಾಂತ್ರಿಕ ಕೆಲಸಗಳ ವಿಳಂಬದಿಂದಾಗಿ ಸಿನಿಮಾವನ್ನು ಮುಂದೂಡಬೇಕಾಯಿತು ಎಂದಿದ್ದಾರೆ ನಿರ್ಮಾಪಕ ಎಚ್‌.ಕೆ.ಪ್ರಕಾಶ್. 

‘ಪಿನಾಕ’ ಎಂಬ ವಿಎಫ್‌ಎಕ್ಸ್‌ ಸ್ಟುಡಿಯೊ ನಡೆಸುತ್ತಿರುವ ಅಭಿಷೇಕ್‌ ಎಂ. ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಬ್ಯಾಂಕ್‌ ದರೋಡೆಯ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ದೀಕ್ಷಿತ್‌ ಶೆಟ್ಟಿ ಹಾಗೂ ಬೃಂದಾ ಆಚಾರ್ಯ ಮುಖ್ಯಭೂಮಿಕೆಯಲ್ಲಿದ್ದಾರೆ.

ADVERTISEMENT

‘ರಂಗಿತರಂಗ’ ಸಿನಿಮಾ ನಿರ್ಮಾಣ ಮಾಡಿದ್ದ ಎಚ್‌.ಕೆ.ಪ್ರಕಾಶ್ ನಿರ್ಮಾಣ ಮಾಡಿರುವ ಆರನೇ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ಸಾಧು ಕೋಕಿಲ, ಗೋಪಾಲಕೃಷ್ಣ ದೇಶಪಾಂಡೆ, ಶ್ರೀವತ್ಸ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ ಮುಂತಾದವರು ನಟಿಸಿದ್ದಾರೆ. ‘ಟೈಗರ್‌’ ಎನ್ನುವ ಪಾತ್ರದಲ್ಲಿ ದೀಕ್ಷಿತ್‌ ನಟಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.