ADVERTISEMENT

‘ಬೆಂಕಿ’ ಹಚ್ಚಲು ಬರುತ್ತಿದ್ದಾರೆ ಅನೀಶ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 6:52 IST
Last Updated 12 ಜನವರಿ 2022, 6:52 IST
ಅನೀಶ್‌ ತೇಜೇಶ್ವರ್
ಅನೀಶ್‌ ತೇಜೇಶ್ವರ್   

ನಟ ಅನೀಶ್‌ ತೇಜೇಶ್ವರ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ದಿನವೇ (ಬುಧವಾರ) ಅವರ ನಟನೆ, ನಿರ್ಮಾಣದ ಹೊಸ ಚಿತ್ರ ‘ಬೆಂಕಿ’ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್‌ಲುಕ್‌ ಬಿಡುಗಡೆ ಆಗಿದೆ. ಅಂದಹಾಗೆ ಇದು ಅನೀಶ್‌ ಅವರ 10ನೇ ಚಿತ್ರ. ‘ವಿಂಕ್ ವಿಷಲ್ ಪ್ರೊಡಕ್ಷನ್’ ಲಾಂಛನದ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.

‘ನಮ್‌ ಏರಿಯಾಲಿ ಒಂದಿನ’, ‘ಪೊಲೀಸ್‌ ಕ್ವಾಟ್ರಸ್‌’, ‘ಅಕಿರ’, ‘ವಾಸು ನನ್ ಪಕ್ಕ ಕಮರ್ಷಿಯಲ್’, ‘ರಾಮಾರ್ಜುನ’ ಚಿತ್ರಗಳಲ್ಲಿ ಅನೀಶ್‌ ನಟಿಸಿ ಕಮನ ಸೆಳೆದಿದ್ದರು. ಈ ಚಿತ್ರದಲ್ಲಿಗಡ್ಡ ಮೀಸೆ ಬಿಟ್ಟು ಖಡಕ್ ಲುಕ್ ನಲ್ಲಿ ಅನೀಶ್ ಕಾಣಿಸಿಕೊಂಡಿದ್ದಾರೆ. ಸಂಪದ ಈ ಚಿತ್ರದ ನಾಯಕಿ.

ಹಿರಿಯ ನಿರ್ದೇಶಕ ಎ.ಆರ್‌. ಬಾಬು ಅವರ ಪುತ್ರ, ಶಾನ್‌ ಅವರು ‘ಬೆಂಕಿ’ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಈಗಾಗಲೇ ಶೇ 80ರಷ್ಟು ಚಿತ್ರೀಕರಣ ಮುಗಿದಿದೆ. ಹಾಡು ಮತ್ತು ಮಾತಿನ ಭಾಗಗಳು ಸ್ವಲ್ಪ ಬಾಕಿ ಇವೆ ಎಂದು ಚಿತ್ರ ತಂಡ ಹೇಳಿದೆ.

ADVERTISEMENT

ಶೃತಿ ಪಾಟೀಲ್, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ತಾರಾಗಣದಲ್ಲಿದ್ದಾರೆ. ಕೌಶಿಕ್‌ ಹರ್ಷ ಸಂಗೀತ ಸಂಯೋಜನೆ, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣ ಸಿನಿಮಾದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.