ADVERTISEMENT

ಬಿರಾದಾರ್‌ಗೆ ಅಮಿತಾಬ್‌ರಿಂದ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 19:30 IST
Last Updated 9 ಅಕ್ಟೋಬರ್ 2020, 19:30 IST
ವೈಜನಾಥ ಬಿರಾದಾರ್ - ಅಮಿತಾಬ್ ಬಚ್ಚನ್
ವೈಜನಾಥ ಬಿರಾದಾರ್ - ಅಮಿತಾಬ್ ಬಚ್ಚನ್   

ಸಿನಿಮಾಗಳಲ್ಲಿ ಕುಡುಕ, ಭಿಕ್ಷುಕನಂತಹ ಪಾತ್ರಗಳಲ್ಲಿ ಸಹಜವಾಗಿ ನಟಿಸುವ, ಹರಿದ ಮಾಸಿದ ಬಟ್ಟೆಯಲ್ಲಿಯೇ ಪಾತ್ರಕ್ಕೆ ಮೆರಗು ನೀಡುವ ಕಲಾವಿದ ಬಿರಾದಾರ್‌ ಅವರು ಈಗ ಲಿವಿಂಗ್ ಲೆಜೆಂಡ್ ಅಮಿತಾಬ್ ಬಚ್ಚನ್‌ರ ಮನಗೆದ್ದಿದ್ದಾರೆ.

ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ‌‌ ‘ಕನಸೆಂಬ ಕುದುರೆಯೇರಿ’ ಸಿನಿಮಾದಲ್ಲಿನ ನಟನೆಗಾಗಿ ಬಿರಾದಾರ್‌ ಅವರಿಗೆ ಸ್ಪೇನ್‌ನ ಮ್ಯಾಡ್ರಿಟ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಈ ವಿಷಯ ಅಷ್ಟು ದೊಡ್ಡ ಸುದ್ದಿಯಾಗಲಿಲ್ಲ. ಆದರೆ ಬಾಲಿವುಡ್ ಬಿಗ್‌ಬಿ ಅಮಿತಾಬ್ ಅವರಿಗೆ ವಿಷಯ ತಲುಪಿತ್ತು. ಕೂಡಲೇ ವೈಜನಾಥ ಬಿರಾದಾರ್‌ ಅವರಿಗೆ ಕರೆ ಮಾಡಿದ್ದ ಅಮಿತಾಬ್‌ ‘ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ದೊರಕಿದ್ದು ನಮಗೆ ಹೆಮ್ಮೆ’ ಎಂದು ಅಭಿನಂದಿಸಿದ್ದಾರೆ.

ಬಿರಾದಾರ್ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘90 ಹೊಡಿ ಮನೀಗ್ ನಡಿ’ ಇವರ ನಟನೆಯ 500ನೇ ಚಿತ್ರ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.