ADVERTISEMENT

43ನೇ ವಸಂತಕ್ಕೆ‌ ಕಾಲಿಟ್ಟ ನಟ ದರ್ಶನ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 4:46 IST
Last Updated 16 ಫೆಬ್ರುವರಿ 2020, 4:46 IST
ನಟ ದರ್ಶನ್ ತೂಗುದೀಪ್
ನಟ ದರ್ಶನ್ ತೂಗುದೀಪ್   

ಗಾಂಧಿನಗರದ ‘ಬಾಕ್ಸ್ ಆಫೀಸ್ ಸುಲ್ತಾನಾ’ ಎಂದೇ ಖ್ಯಾತರಾದ ನಟ ದರ್ಶನ್ ತೂಗುದೀಪ್ ಭಾನುವಾರ 43ನೇ ವಸಂತಕ್ಕೆ‌ ಕಾಲಿಟ್ಟರು.

ಲೈಟ್ ಬಾಯ್ ಆಗಿ ಚಿತ್ರರಂಗದಲ್ಲಿ ವೃತ್ತಿ ಆರಂಭಿಸಿದ ಅಭಿಮಾನಿಗಳ ನೆಚ್ಚಿನ ‘ದಚ್ಚು’ ನಾಯಕ‌ನಟರಾಗಿ ಬಣ್ಣ ಹಚ್ಚಿದ್ದು 2002ರಲ್ಲಿ ತೆರೆಕಂಡ ‘ಮೆಜೆಸ್ಟಿಕ್’ ಮೂಲಕ. ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು‌ ಪಿ.ಎನ್.‌ ಸತ್ಯ. ‘ಮುನಿರತ್ನ ಕುರುಕ್ಷೇತ್ರ’ ದರ್ಶನ್ ನಟನೆಯ 50ನೇ ಸಿನಿಮಾ.

ಬೆಂಗಳೂರಿನ ರಾಜರಾಜೇಶ್ವರಿನಗರದ ಐಡಿಯಲ್ ಟೌನ್‌ನಲ್ಲಿರುವ ಅವರ ನಿವಾಸದ ಮುಂದೆ‌ ಭಾನುವಾರ ಮಧ್ಯರಾತ್ರಿಯಿಂದಲೇ ಅಪಾರ ಸಂಖ್ಯೆಯಲ್ಲಿ‌ ಅಭಿಮಾನಿಗಳು ನೆರೆದಿದ್ದರು. ಈ ಹಿಂದೆಯೇ ದಚ್ಚು ನಟನೆಯ ‘ರಾಬರ್ಟ್’ ಚಿತ್ರದ ಟೀಸರ್ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ತಿಳಿಸಿತ್ತು.

ADVERTISEMENT

ನಿರ್ದೇಶಕ ತರುಣ್ ಸುಧೀರ್‌ ಮತ್ತು ಚಿತ್ರತಂಡ ಅಭಿಮಾನಿಗಳ ಎದುರು ಟೀಸರ್ ಅನ್ನು ಬಿಡುಗಡೆಗೊಳಿಸಿತು. ಈ ಚಿತ್ರದಲ್ಲಿ ದರ್ಶನ್ ವಿಭಿನ್ನ‌ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ, ಚಿತ್ರದ ಶೂಟಿಂಗ್‌ ಕೂಡ‌ ಪೂರ್ಣಗೊಂಡಿದೆ.

ಪೋಸ್ಟರ್‌ನಲ್ಲಿ ಹನುಮನಾಗಿ ಕಾಣಿಸಿಕೊಂಡಿದ್ದ ಅವರು ಟೀಸರ್‌ನಲ್ಲಿ ರಾಮ‌ ಮತ್ತು ರಾವಣನ ಬಗ್ಗೆ ಮಾತನಾಡಿದ್ದಾರೆ. ಟೀಸರ್ ‌ಬಿಡುಗಡೆಗೊಂಡಾಗ ಅವರ ಅಭಿಮಾನಿಗಳ‌ ಸಂಭ್ರಮ ಮುಗಿಲು ಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.