ಬೆಂಗಳೂರು: ಹತ್ತಿಯಿಂದ ತಯಾರಿಸುವ ಬಿಳಿ ಷರ್ಟ್ ಮತ್ತು ಧೋತಿಗಳನ್ನು ಮಾರಾಟ ಮಾಡುವ ಬಹು ಜನಪ್ರಿಯ ಬ್ರ್ಯಾಂಡ್ ರಾಮರಾಜ್ ಕಾಟನ್ಗೆ ನಟ ದರ್ಶನ್ ತೂಗುದೀಪ್ ಅವರನ್ನು ಹೊಸ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ಕಂಪನಿಯು ವೈವಿಧ್ಯಮಯ ಧೋತಿಗಳನ್ನು ತಯಾರಿಸುತ್ತಿದೆ. ಮಕ್ಕಳಿಗಾಗಿ ಲಿಟ್ಲ ಸ್ಟಾರ್ ಧೋತೀಸ್ ಹೆಸರಿನ ವಿಶೇಷ ಸಂಗ್ರಹ ಹೊಂದಿದೆ. ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಗೊಂಡಿರುವ ವೆಲ್ಕ್ರೊ ಪಾಕೆಟ್ ಧೋತಿಗಳು ಯುವಕರ ಮೆಚ್ಚುಗೆಗೆ ಪಾತ್ರವಾಗಿವೆ.
ಕಂಪನಿಯ ಆನ್ಲೈನ್ ವಹಿವಾಟು ವಿದೇಶಗಳಲ್ಲಿನ ಗ್ರಾಹಕರ ಅಗತ್ಯಗಳನ್ನೂ ಪೂರೈಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.