ADVERTISEMENT

ಕುದುರೆ, ಆಕಳು, ಕುರಿ ವೀಕ್ಷಿಸಿದ ದರ್ಶನ್‌

ಶಾಸಕ ಶಾಮನೂರು ಶಿವಶಂಕರಪ್ಪ ಮನೆಗೆ ಭೇಟಿ ನೀಡಿದ ನಟ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 19:44 IST
Last Updated 30 ಆಗಸ್ಟ್ 2020, 19:44 IST
ದಾವಣಗೆರೆಯಲ್ಲಿ ಕುದುರೆ ಮತ್ತು ಅಭಿಮಾನಿ ಮಾಗನಳ್ಳಿ ಪರಶುರಾಮ್‌ ಜತೆಗೆ ನಟ ದರ್ಶನ್‌
ದಾವಣಗೆರೆಯಲ್ಲಿ ಕುದುರೆ ಮತ್ತು ಅಭಿಮಾನಿ ಮಾಗನಳ್ಳಿ ಪರಶುರಾಮ್‌ ಜತೆಗೆ ನಟ ದರ್ಶನ್‌   

ದಾವಣಗೆರೆ: ಚಿತ್ರನಟ ದರ್ಶನ್‌ ಭಾನುವಾರ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೇ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಜತೆಗೆ ತೆರಳಿ ಕುದುರೆ, ಆಕಳು, ಕುರಿಗಳನ್ನು ವೀಕ್ಷಿಸಿದರು.

ಮಧ್ಯಾಹ್ನ ದಾವಣಗೆರೆಗೆ ಬಂದಿದ್ದರು. ಬಳಿಕ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ಇರುವ ಶಾಮನೂರು ಅವರ ತೋಟಕ್ಕೆ ಭೇಟಿ ನೀಡಿದರು. ಅಲ್ಲಿ ಇರುವ ವಿವಿಧ ಜಾತಿಗಳ ಹಸುಗಳು, ವಿವಿಧ ತಳಿಯ ಕುರಿಗಳನ್ನು ವೀಕ್ಷಿಸಿದರು. ಬಳಿಕ ದಾವಣಗೆರೆ ಕಲ್ಲೇಶ್ವರ ರೈಸ್‌ ಮಿಲ್‌ ಬಳಿ ಶಾಮನೂರು ಕುಟುಂಬ ಸಾಕಿರುವ ಕುದುರೆಗಳನ್ನು ನೋಡಿದರು. ಅವುಗಳ ಲಾಲನೆ, ಪಾಲನೆಗಳ ಬಗ್ಗೆ ಮಾಹಿತಿ ಪಡೆದರು. ಸೋಮವಾರ ಕೆಲವು ರೈತರನ್ನು ಭೇಟಿ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT