ADVERTISEMENT

ಚಂದನವನಕ್ಕೆ ‘ಝಾನ್ಸಿ’ಯಾಗಿ ಬರುತ್ತಿದ್ದಾರೆ ಲಕ್ಷ್ಮಿ ರೈ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 19:41 IST
Last Updated 5 ಆಗಸ್ಟ್ 2018, 19:41 IST
ಲಕ್ಷ್ಮಿ ರೈ
ಲಕ್ಷ್ಮಿ ರೈ   

ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಲಕ್ಷ್ಮಿ ರೈ ಈಗ ‘ಚಂದನವನ’ಕ್ಕೆ ಮರಳಿದ್ದಾರೆ. ಇವರು ಈ ಹಿಂದೆ ಉಪೇಂದ್ರ ಜೊತೆ ‘ಕಲ್ಪನಾ’ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಲಕ್ಷ್ಮಿ ಬಣ್ಣ ಹಚ್ಚಲು ಸಿದ್ಧವಾಗಿರುವುದು ಪಿವಿಎಸ್‌ ಗುರುಪ್ರಸಾದ್ ನಿರ್ದೇಶನದ ‘ಝಾನ್ಸಿ’ ಚಿತ್ರಕ್ಕಾಗಿ.

‘ಝಾನ್ಸಿ’ ಚಿತ್ರದ ನಾಯಕಿಯ ಪಾತ್ರಕ್ಕೆ ಲಕ್ಷ್ಮಿ ಅವರೇ ಸೂಕ್ತ ಎಂದು ತೀರ್ಮಾನಿಸಿ ಗುರುಪ್ರಸಾದ್, ಚಿತ್ರದ ಕಥೆಯ ಎಳೆಯನ್ನು ಕಳುಹಿಸಿಕೊಟ್ಟಿದ್ದರಂತೆ. ಇದನ್ನು ಪರಿಶೀಲಿಸಿದ ಲಕ್ಷ್ಮಿ, ಕಥೆ ಇಷ್ಟವಾಗಿರುವ ಕಾರಣ ಸಿನಿಮಾದಲ್ಲಿ ನಟಿಸಲು ಹ್ಞೂಂ ಅಂದಿದ್ದಾರೆ.

ಇದು ನಾಯಕಿಯ ಅಭಿನಯಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಿರುವ ಸಿನಿಮಾ. ಇದರಲ್ಲಿ ನಾಯಕಿಯು ತನಗಾದ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಕಥೆ ಇದೆಯಂತೆ. ಒಂದಿಷ್ಟು ಆ್ಯಕ್ಷನ್‌ ಕೂಡ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರವಿ ಕಾಳೆ, ಡ್ಯಾನಿ ಕುಟ್ಟಪ್ಪ, ಬಾಲಿವುಡ್ ನಟ ಮುಕೇಶ್ ರಿಷಿ ಕೂಡ ಇದರಲ್ಲಿ ಅಭಿನಯಿಸಲಿದ್ದಾರೆ ಎಂದು ಚಿತ್ರತಂಡ ಹೇಳಿದೆ. ರಾಜೇಶ್‍ ಕುಮಾರ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆಗಸ್ಟ್ 29ರಂದು ಚಿತ್ರದ ಮುಹೂರ್ತ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.