ಕಾಲಿವುಡ್ ನಟ ಸಿಲಂಬರಸನ್ ಟಿ.ಆರ್. ನಟನೆಯ ‘ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ಧಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್ಕಶ್ಯಪ್, ತೆಲುಗಿನಲ್ಲಿ ರವಿತೇಜ ಮತ್ತು ಮಲೆಯಾಳಂದಲ್ಲಿ ಪೃಥ್ವಿರಾಜ್ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದರು.
ಸದ್ಯ ಕನ್ನಡದ ಶೀರ್ಷಿಕೆ ಬದಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಹೆಸರನ್ನು ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ. ಇತ್ತೀಚೆಗೆ ನಡೆದ ದೃಶ್ಯವೊಂದರ ಚಿತ್ರೀಕರಣದಲ್ಲಿ ಆರು ನಿಮಿಷದ ಸಂಭಾಷಣೆಯನ್ನು ಒಂದೇ ಟೇಕ್ನಲ್ಲಿ ಮುಗಿಸಲಾಗಿತ್ತು.
‘ಮಾನಾಡು’ ರಾಜಕೀಯ ಕಥಾ ವಸ್ತುವನ್ನು ಒಳಗೊಂಡಿದೆ. ವೆಂಕಟೇಶ್ ಪ್ರಭು ಅವರ ಕಥೆ ಹಾಗೂ ನಿರ್ದೇಶನ,ಯುವನ್ ಶಂಕರ್ರಾಜ ಅವರ ಸಂಗೀತ ಇದೆ.ರಿಚರ್ಡ್ ಎಂ.ನಾಥನ್ ಅವರ ಛಾಯಾಗ್ರಹಣವಿದೆ. ಸುರೇಶ್ ಕಮತ್ಚಿ ಅವರು ‘ವಿ ಹೌಸ್ ಪ್ರೊಡಕ್ಷನ್’ ಲಾಂಛನದ ಅಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಕಲ್ಯಾಣಪ್ರಿಯಾ ದರ್ಶನ್ ಅವರು ಚಿತ್ರದ ನಾಯಕಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.