ADVERTISEMENT

ಕಂಠೀರವ ಕ್ರೀಡಾಂಗಣಕ್ಕೆ ಪುನೀತ್ ಪಾರ್ಥೀವ ಶರೀರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 14:11 IST
Last Updated 29 ಅಕ್ಟೋಬರ್ 2021, 14:11 IST
ಕಂಠೀರವ ಕ್ರೀಡಾಂಗಣಕ್ಕೆ ಪುನೀತ್ ಪಾರ್ಥೀವ ಶರೀರ
ಕಂಠೀರವ ಕ್ರೀಡಾಂಗಣಕ್ಕೆ ಪುನೀತ್ ಪಾರ್ಥೀವ ಶರೀರ   

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ ಪಾರ್ಥೀವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ತರಲಾಗಿದ್ದು ಅಭಿಮಾನಿಗಳು ಹಾಗೂ ಗಣ್ಯರ ಅಂತಿಮ ದರ್ಶನಕ್ಕೆ ಇಡಲಾಗಿದೆ.

ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರರಾದ ವಿನಯ್ ಹಾಗೂ ಯುವ ರಾಜ್‌ಕುಮಾರ್ ಹಾಗೂ ಕುಟುಂಬದವರು ಪಾರ್ಥೀವ ಶರೀರ ಹೊತ್ತು ತಂದರು.

ಪಾರ್ಥೀವ ಶರೀರ ಕ್ರೀಡಾಂಗಣ ಪ್ರವೇಶಿಸುವಾಗ ಅಭಿಮಾನಿಗಳು ಜಯಕಾರ ಮೊಳಗಿಸಿದರು.

ADVERTISEMENT

ನಿರ್ಮಾಪಕ‌ ರಾಕಲೈನ್ ವೆಂಕಟೇಶ್, ವಿಜಯ ರಾಘವೇಂದ್ರ, ದುನಿಯಾ ವಿಜಯ್,ರಂಗಾಯಣ ರಘು, ಶ್ರೀಮುರುಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.