ಒಂದು ಗಂಟೆ ಅವಧಿಯ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಕೆಲವು ಯುವಕರೇ ಸೇರಿಕೊಂಡು ನಿರ್ಮಿಸಿದ ಚಿತ್ರ ‘ಸಂಹಾರಂ’. ಇತ್ತೀಚೆಗಷ್ಟೇ ಟ್ರೈಲರ್ ಬಿಡುಗಡೆಯಾಗಿದೆ.
‘ಸಂಹಾರಂ’ಗೆ ‘ನೋವು, ಅಧಿಕಾರ, ಆಶ್ವಾಸನೆ’ ಎಂಬ ಅಡಿಬರಹವಿದೆ. ನಟ ಶ್ರೇಯಸ್ ಮಂಜು ಟ್ರೈಲರ್ ಬಿಡುಗಡೆ ಮಾಡಿದರು.
ಚಿತ್ರವು ಸೇಡಿನ ಕಥೆಯನ್ನು ಹೊಂದಿದೆ. ತಮಿಳುನಾಡು, ಮಹರಾಷ್ಟ್ರ, ಅಮೇರಿಕದಲ್ಲಿ ನಡೆದಂತಹ ನೈಜ ಘಟನೆಗಳನ್ನು ಆರಿಸಿಕೊಂಡು ಚಿತ್ರರೂಪಕ್ಕೆ ತರಲಾಗಿದೆ. ಜನ ಪ್ರತಿನಿಧಿಯಾದವನು ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಅದೇ ಜನರು ಯಾರ ಮೇಲೆ ನಂಬಿಕೆ ಇಡಬೇಕು ಎಂಬುದು ಒಂದು ಸಾಲಿನ ಕಥೆ.
ಚಂದನ್ ಕೇಶವ್ ರಚನೆ, ಸಂಕಲನ, ನಿರ್ದೇಶನ, ನಟನೆ ಜತೆಗೆ ಬಂಡವಾಳ ಹೂಡಿದ್ದಾರೆ. ಎಸ್.ಮನೋಜ್ಕುಮಾರ್ ಪಾಲುದಾರರು. ತಂದೆಯಾಗಿ ಹಿರಿಯ ನಟ ಸಂದೀಪ್ ಮಲಾನಿ ಉಳಿದಂತೆ ಹೊಸಬರುಗಳಾದ ಸಿರಿಶಾ, ನಾಗರಾಜ ಭಂಡಾರಿ, ವಿನಯ್, ಸುಪ್ರಿತ್ ಕೃಷ್ಣಮೂರ್ತಿ, ಅನುಪಮಾ ಬಸವರಾಜು, ನಾಗಭೂಷಣ್, ಪ್ರಭು ಮುಂತಾದವರು ನಟಿಸಿದ್ದಾರೆ. ಸಂಗೀತ ರಿಯೋ ಆಂಟೋನಿ, ಛಾಯಾಗ್ರಹಣ ಚೇತನ್ ಕೇಶವ್, ಸಂಭಾಷಣೆ-ಸಾಹಿತ್ಯ ನಿಹಾರಿಕಾ ರಾಘವೇಂದ್ರ ಅವರದ್ದು. ಹೆಸರಘಟ್ಟ, ಆನೇಕಲ್, ಅತ್ತಿಬೆಲೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.