ಸೀತಾರಾಂ ಬಿನೋಯ್ – ಕೇಸ್ ನಂಬರ್ 18 ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದಿದೆ ಚಿತ್ರತಂಡ.
ಚಿತ್ರಕ್ಕೆ ದೇವಿಪ್ರಸಾದ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರವಿದು. ದೇವಿಪ್ರಸಾದ್ ಶೆಟ್ಟಿ, ಸಾತ್ವಿಕ್ ಹೆಬ್ಬಾರ್ ಹಾಗೂ ಎಂಆರ್ಪಿ ಅವರು ಬಂಡವಾಳ ಹೂಡಿದ್ದಾರೆ. ವಿಜಯ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದು ವಿಜಯರಾಘವೇಂದ್ರ ಅವರ 50ನೇ ಚಿತ್ರ.
ಕಳೆದ ವರ್ಷದ ಆಗಸ್ಟ್ನಲ್ಲಿ ಲಾಕ್ ಡೌನ್ ತೆರವಾದ ಕೂಡಲೇ ಕೇವಲ ಇಪ್ಪತ್ತು ದಿನಗಳಲ್ಲಿ ಶಿವಮೊಗ್ಗದ ತೀರ್ಥಹಳ್ಳಿ, ಕೋಣಂದೂರಿನ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಮೊದಲು ಸ್ಟಾರ್ ಸುವರ್ಣ ಚಾನೆಲ್ನಲ್ಲಿ (ಆ. 16) ಪ್ರಸಾರವಾಗಿತ್ತು. ಮರುದಿನ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಮೂರನೇ ವಾರ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದರು ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ.
ವಿಜಯರಾಘವೇಂದ್ರ ಪೋಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.
ನಾಗರಾಜ್, ಶ್ರೀಹರ್ಷ ಗೋಭಟ್ ನೀನಾಸಂ, ಸಾತ್ವಿಕ್ ಹೆಬ್ಬಾರ್, ದೇವಿಪ್ರಕಾಶ್ ತಾರಾಗಣದಲ್ಲಿ ಇದ್ದಾರೆ. ಸಿನಿಮಾಕ್ಕೆ ಹೇಮಂತ್ ಛಾಯಾಗ್ರಹಣವಿದ್ದು, ಶಶಾಂಕ್ ನಾರಾಯಣ ಸಂಭಾಷಣೆಯ ಜೊತೆಗೆ ಸಂಕಲನ ಮಾಡಿದ್ದಾರೆ. ಚಿತ್ರಕ್ಕೆ ಗಗನ್ ಬಡೇರಿಯ ಸಂಗೀತವಿದೆ. ಭವಾನಿ ಶಂಕರ್ ಆನೇಕಲ್ಲು ಕಲಾನಿರ್ದೇಶನ ಮಾಡಿದ್ದಾರೆ. ‘ತಾಂತ್ರಿಕವಾಗಿಯೂ ಸಿನಿಮಾ ಗೆದ್ದಿದೆ ಎಂದಿದೆ’ ಚಿತ್ರತಂಡ. ಮುಂದೆ ಓಟಿಟಿಯಲ್ಲಿ ಬಿಡುಗಡೆ ಮಾಡುವ ತಯಾರಿಗಳೂ ನಡೆಯುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.