ಯುವಜೋಡಿಯ ಸುಂದರ ಪ್ರೇಮಕಥೆ ಹೊತ್ತು ಬಂದಿದೆ ‘ಸ್ಮರಾಮಿ’. ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು ಡಿಸೆಂಬರ್ ಕೊನೆಯ ವಾರದಲ್ಲಿ ತೆರೆ ಕಾಣಲಿದೆ ಎಂದಿದೆ ಚಿತ್ರತಂಡ.
ಇದುವರೆಗೆ ಹೇಳದ ಭಿನ್ನ ಕಥೆಯೊಂದನ್ನು ತೆರೆಯ ಮೇಲೆ ತರಲಾಗಿದೆ. ಪ್ರೇಕ್ಷಕನಿಗೆ ಸುಂದರ ಅನುಭವ ನೀಡಲಿದೆ ಎಂದಿದ್ದಾರೆ ಚಿತ್ರದ ಕಥೆಗಾರ, ನಿರ್ದೇಶಕ ಶಿವರಾಮಕೃಷ್ಣ. ಚಿತ್ರದಲ್ಲಿ ಬಹುತೇಕ ಹೊಸ ಮುಖಗಳೇ ತುಂಬಿವೆ. ತಾಜಾ ಕಥೆ, ಒಂದಿಷ್ಟು ಕಮರ್ಷಿಯಲ್ ಅಂಶಗಳೂ ಈ ಚಿತ್ರದಲ್ಲಿವೆ. ಮೋಷನ್ ಪೋಸ್ಟರ್ ಹಾಗೂ ಒಂದು ಹಾಡನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ಪ್ರೇಕ್ಷಕರು ಸ್ವಾಗತಿಸುತ್ತಾರೆ ಎಂಬ ನಂಬಿಕೆಯಿದೆ. ಎಸ್ಆರ್ಆರ್ ಎಂಟರ್ಪ್ರೈಸಸ್ ಲಾಂಛನದಲ್ಲಿ ಕೆ. ರವಿಕುಮಾರ್ ಈ ಚಿತ್ರ ನಿರ್ಮಿಸಿದ್ದಾರೆ. ಇದೇ ಲಾಂಛನದಲ್ಲಿ ಇನ್ನೂ ಎರಡು ಚಿತ್ರಗಳು ಬರಲಿವೆ ಎಂದಿದ್ದಾರೆ ನಿರ್ದೇಶಕರು.
ನಿರ್ದೇಶಕರೇ ಈ ಚಿತ್ರದ ನಾಯಕ. ನಂದಿನಿ ನಟರಾಜ್ ನಾಯಕಿ. ಗಿರೀಶ್ ಜತ್ತಿ, ಚಿತ್ಕಲಾ ಬಿರಾದಾರ್, ರಾಮಕೃಷ್ಣ, ಎಂ.ಕೆ. ಮಠ,ಪ್ರೇಮ್ ಪಿ.ಡಿ. ತಾರಾಗಣದಲ್ಲಿದ್ದಾರೆ. ಆ್ಯರೋನ್ ಎಚ್. ಸಂಗೀತವಿದೆ. ಪ್ರಸಾದ್ ಎಚ್.ಎಂ. ಅವರ ಛಾಯಾಗ್ರಹಣವಿದೆ. ಶಿವರಾಮಕೃಷ್ಣ ಅವರ ಮೊದಲ ಚಿತ್ರವಿದು.
ಚಿತ್ರದ ಹಾಡು ನೋಡಲು ಲಿಂಕ್:https://www.youtube.com/watch?v=bIqGP3dJwUk
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.